ಪತಿ ಪತ್ನಿಯರ ನಡುವೆ ಹೊಂದಾಣಿಕೆಯಿದ್ದ ಕಾಲವೊಂದಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಸಣ್ಣ ಪುಟ್ಟ ಮನಸ್ತಾಪಗಳು ಎದುರಾದರೆ ಕುಳಿತು ಮಾತನಾಡಿ ಸರಿ ಪಡಿಸಿಕೊಳ್ಳುವ ಬದಲು ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವವರು ಇದ್ದಾರೆ. ಅದಲ್ಲದೇ ಈ ವಿಚಾರವು ದೊಡ್ಡದಾಗಿ ಇನ್ಯಾವುದೋ ಅ- ನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ. ಈ ಹಿಂದೆ ನೆಲ್ಲೈನಲ್ಲಿ ಪತಿಗೆ ವಿ-ಷ ನೀಡಿ ಜೀವ ತೆಗೆದ ಪತ್ನಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸಿಂಘರವೇಲನ್ (40) ನೆಲ್ಲೈ ಜಿಲ್ಲೆಯ ವೆಕ್ತಿಯಾನ್ವಿಲೈ ಸಮೀಪದ ಕುಟ್ಟಂ ಪಕ್ಕದ ಕುಂಜನ್ವಿಲೈ ಮುಖ್ಯ ರಸ್ತೆಯ ನಿವಾಸಿ. ಕೂಲಿ ಕಾರ್ಮಿಕನಾಗಿದ್ದು, ಪತ್ನಿ ಜಯಕೋಡಿ ಹಾಗೂ ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಸಿಂಗಾರವೇಲನ್ ಇತ್ತೀಚೆಗಷ್ಟೇ ಮ-ದ್ಯಪಾನ ಮಾಡುತ್ತಿದ್ದು, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಅದಲ್ಲದೇ ಕು-ಡಿದ ಅಮಲಿನಲ್ಲಿ ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿತ್ತು.
ಹೀಗಾಗಿ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ವೇಳೆ ಸಿಂಗಾರವೇಲನ್ ತಾಯಿ ಮೂಕಮ್ಮಳ್ ಮಗನ ಮನೆಗೆ ಹೋದಾಗ ಸಿಂಗಾರವೇಲನ್ ವಾಂತಿ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃ-ತಪಟ್ಟಿರುವುದನ್ನು ಖಚಿತ ಪಡಿಸಿದ್ದರು. ಆ ಬಳಿಕ ಸಿಂಗಾರವೇಲನ್ ಅವರ ಮೃ-ತದೇಹವನ್ನು ಮನೆಗೆ ಕೊಂಡೊಯ್ದು ರೆಫ್ರಿಜರೇಟರ್ ನಲ್ಲಿ ಇಡಲಾಗಿತ್ತು. ಈ ನಡುವೆ ಮಗನ ಈ ಸಾ-ವಿನಲ್ಲಿ ನಿಗೂಢತೆಯಿದೆ, ಈ ಬಗ್ಗೆ ಜಯಕೋಡಿ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಮೂಕಮ್ಮಳ್ ಉವರಿ ಪೊಲೀಸರಿಗೆ ದೂರು ನೀಡಿದ್ದರು.
ಹೀಗಾಗಿ ಉವರಿ ಪೊಲೀಸರು ಸಿಂಗಾರವೇಲನ್ ಅವರ ಈ ಅಗಲುವಿಕೆಯನ್ನು ಅನುಮಾನಾಸ್ಪದ ಸಾ-ವು ಎಂದು ದಾಖಲಿಸಿಕೊಂಡು ಮೃ-ತದೇಹವನ್ನು ವಶಪಡಿಸಿಕೊಂಡು ಮ-ರಣೋತ್ತರ ಪರೀಕ್ಷೆಗಾಗಿ ನೆಲ್ಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಸಿಂಗಾರವೇಲನ್ ಅವರ ಪತ್ನಿ ಜಯಕೋಡಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರು ಹಾದಿ ತಪ್ಪುವಂತಹ ಉತ್ತರ ನೀಡಿದ್ದರು.
ಆ ಕೂಡಲೇ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸಿಂಗಾರವೇಲನ್ ಪ್ರತಿದಿನ ಕುಡಿದು ಬಂದು ಜಗಳವಾಡುತ್ತಿದ್ದ ಕಾರಣ, ಸಿಟ್ಟಿನಿಂದ ಆಹಾರದಲ್ಲಿ ಔಷಧ ಬೆರೆಸಿ ಜೀವ ತೆಗೆದಿರುವುದಾಗಿ ಜಯಕೋಡಿ ತಿಳಿಸಿದ್ದರು. ಈ ತಪ್ಪೊಪ್ಪಿಗೆಯ ನಂತರ, ಪೊಲೀಸರು ಜಯಕೋಡಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದು, ತಂದೆಯಿಲ್ಲದೇ, ತಾಯಿ ಇದ್ದು ಕಂಬಿ ಎಣಿಸುತ್ತಿದ್ದು, 3 ಮಕ್ಕಳು ಅನಾಥರಾಗಿರುವುದು ನಿಜಕ್ಕೂ ವಿಪರ್ಯಾಸವೆನ್ನಬಹುದು.