ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಹೊಸ ಅಧ್ಯಾಯ. ಮದುವೆಯ ನಂತರದ ಜೀವನವು ವ್ಯಕ್ತಿಯು ಅದೇಗೆ ಇದ್ದರೂ ಕೂಡ ಹೊಂದಿ ಕೊಂಡು ಬದುಕಲೇ ಬೇಕು. ಇನ್ನು, ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದಿದೆ. ಹೌದು ಅಂದಹಾಗೆ, ಹೆಣ್ಣು ಗಂಡು ಕೊನೆವರೆಗೂ ಜೊತೆಯಾಗಿ ಇರುವೆನು ಎಂದು ಇಬ್ಬರು ಪ್ರಮಾಣ ಮಾಡುವ ಈ ಸಂಭ್ರಮದ ಘಳಿಗೆಗೆ ಎಲ್ಲರೂ ಸಾಕ್ಷಿಯಾಗಿರುತ್ತಾರೆ.
ಮದುವೆ ಎರಡು ಮನಸ್ಸುಗಳ ಬಂಧ. ಎರಡು ಕುಟುಂಬಗಳು ಎರಡು ಕುಟುಂಬಗಳು ಒಂದಾಗುತ್ತದೆ. ಇನ್ನು ಹೆಣ್ಣಿರಲಿ ಗಂಡಿರಲಿ ಇಬ್ಬರ ಬದುಕಿನ ಸಂಭ್ರಮ ಕ್ಷಣ ಈ ಮದುವೆ. ಮದುವೆಯ ಎಲ್ಲಾ ಸಂಬಂಧಗಳು ಸರಿ ಇದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಅಲ್ಲಿ ಸಂಬಂಧಗಳು ಕೂಡ ಚೂರು ಚೂರಾಗಿ ಬಿಡುತ್ತದೆ. ಮದುವೆಯಾಗುವ ಪ್ರತಿ ಹೆಣ್ಣು ಗಂಡು ಒಬ್ಬರ ನೆರಳಲ್ಲಿ ಬದುಕಲೇ ಬೇಕು.
ತಪ್ಪಿರಲಿ ಒಪ್ಪಿರಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗುವ ಜಾಣ್ಮೆ ಸತಿ ಪತಿ ಇಬ್ಬರಲ್ಲಿ ಇರಲೇ ಬೇಕು. ಒಬ್ಬರ ಮನಸ್ಥಿತಿಗಳು, ಹೊಂದಾಣಿಕೆ ಸ್ವಭಾವ ಬೇರೆಯಾದರೆ ಸಂಸಾರ ಎಂಬ ಬಂಡಿ ವಿರುದ್ಧವಾಗಿ ಚಲಿಸುತ್ತದೆ.
ಎರಡು ಕುಟುಂಬಗಳು ಒಂದಾಗಿ ಗಂಡು ಹೆಣ್ಣು ಜೊತೆಯಾಗಿ ನಡೆದರೆ ಎಲ್ಲವೂ ಅದ್ಭುತ. ಇಲ್ಲಿ ಮುಖ್ಯವಾಗಿ ಬದುಕಬೇಕಾಗಿರುವುದು ಎರಡು ಜೀವಗಳು. ಈ ಸಂಸಾರ ಎಂಬ ಬಂಡಿ ಜೊತೆಯಾಗಿ ನಡೆಯಬೇಕೆಂದರೆ ಎರಡು ಮನಸ್ಸುಗಳು ಒಂದಾಗಿ ಬದುಕಬೇಕಾಗುತ್ತದೆ. ವಿರುದ್ಧ ಮನಸ್ಥಿತಿಗಳು ಜೊತೆಯಾಗಿ ಬದುಕುವುದು ಹೇಳುವಷ್ಟು ಸುಲಭವಲ್ಲ. ಕಷ್ಟವನ್ನು ಅರಿತು ನೋವು ನಲಿವಿನಲ್ಲಿ ಗಂಡು ಹೆಣ್ಣು ಜೊತೆಯಾಗಿ ನಡೆದರೆ, ಬದುಕೇ ಸ್ವರ್ಗವಾಗುತ್ತದೆ.
ಪ್ರತಿಯೊಬ್ಬರು ಕೂಡ ಮದುವೆಯ ಕುರಿತಾಗಿ ಸಹಜವಾಗಿ ನೂರಾರು ಕನಸುಗಳನ್ನು ಕಟ್ಟಿರುತ್ತಾರೆ. ಈ ಕನಸಿಗೆ ಸರಿ ಹೊಂದುವಂತೆ ತನ್ನ ಬದುಕಿಗೆ ಸೂಕ್ತ ಆಗುವ ಹುಡುಗ ದೊರೆತರೆ ಅದಕ್ಕಿಂತ ದೊಡ್ಡ ಖುಷಿ ಸಂತೋಷ ಇನ್ನೊಂದಿಲ್ಲ. ಮದುವೆಯ ನಂತರ ಮಹಿಳೆಯರ ಜೀವನ ಬದಲಾಗುತ್ತದೆ. ತನ್ನ ಗಂಡನಿಗಾಗಿ, ಗಂಡನ ಏಳಿಗೆಗಾಗಿ ಹೆಣ್ಣು ಬದುಕುತ್ತಾಳೆ.
ಅಷ್ಟೇ ಅಲ್ಲದೆ ಗಂಡನ ಕಷ್ಟ ಸುಖದಲ್ಲಿ ಸಮಪಾಲು ಸ್ವೀಕರಿಸುತ್ತಾಳೆ. ಆದರೆ ಗಂಡ ಎಷ್ಟೇ ಒಳ್ಳೆಯವನು ಆಗಿದ್ದರೂ ಕೂಡ ಹೆಣ್ಣು ಮಾತ್ರ ಕೆಲವು ವಿಚಾರಗಳನ್ನು ಗಂಡನಿಂದ ಮುಚ್ಚಿಡುತ್ತಾಳೆ. ಆ ವಿಚಾರಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುತ್ತದೆ. ಹೆಣ್ಣು ಮಕ್ಕಳಿಗೆ ಮುಂದಿನ ಜೀವನದ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ ಕೆಲಸಕ್ಕೆ ಹೋಗದ ಹೆಣ್ಣು ಮಕ್ಕಳು ಕೂಡ ಸ್ವಲ್ಪ ಹಣವನ್ನಾದರೂ ಗಂಡನಿಗೆ ಗೊತ್ತಿಲ್ಲದೇ ಕೂಡಿರುತ್ತಾರೆ. ಆದರೆ ಈ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ.
ಅಷ್ಟೇ ಅಲ್ಲದೆ ತಮ್ಮ ಇಷ್ಟ ಕಷ್ಟಗಳನ್ನು ಎಲ್ಲಿಯು ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ. ಅದಲ್ಲದೆ ದೈಹಿಕ ಸುಖದ ಬಗ್ಗೆ ಆಸಕ್ತಿಯಿದ್ದರೂ ಹೇಳಿಕೊಳ್ಳುವುದೇ ಇಲ್ಲ. ನಾಚಿಕೆ ಸ್ವಭಾವವನ್ನು ಹೊಂದಿರುವ ಕಾರಣ ಇಂತಹ ವಿಚಾರಗಳನ್ನು ಬಾಯಿ ಬಿಟ್ಟು ಹೇಳಲು ಇಷ್ಟ ಪಡುವುದಿಲ್ಲ. ಈ ವಿಚಾರಗಳ ಬಗ್ಗೆ ಮಾತನಾಡಿದರೆ ತನ್ನ ಬಗ್ಗೆ ಗಂಡ ಏನು ಅಂದುಕೊಳ್ಳುತ್ತಾನೋ ಎನ್ನುವ ಭಯ ಸಹಜವಾಗಿ ಮಹಿಳೆಯರಲ್ಲಿ ಇರುತ್ತದೆ.. ಹೀಗಾಗಿ ಗಂಡನಾದನು ಹೆಣ್ಣಿನ ಇಷ್ಟ ಕಷ್ಟಗಳನ್ನು ಅರಿತುಕೊಂಡುಪತ್ನಿಯ ಆಸೆಗಳನ್ನು ಈಡೇರಿಸಿಕೊಳ್ಳಬೇಕಾಗುತ್ತದೆ.