Rajesh kannan and manumangala : ಪ್ರೇಮಿಯ ಜೊತೆಗಿನ ಚೆಲ್ಲಾಟಕ್ಕಾಗಿ ಹೆಂಡತಿ ಗಂಡನಿಗೆ ಮಾಡಿದ್ದೇನು ಗೊತ್ತಾ.. ಇತ್ತೀಚಿನ ದಿನಗಳಲ್ಲಿ ಯಾರಲ್ಲೂ ಕೂಡ ಸಂಬಂಧಗಳಿಗೆ ನೀಡಿಬೇಕಾಗಿರುವ ಗೌರವ ಕಂಡು ಬರುತ್ತಿಲ್ಲ ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಹುದಾಗಿದೆ. ಅದಕ್ಕೆ ತಕ್ಕಂತೆ ಎನಿಸುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಅದಕ್ಕೆ ಉದಾಹರಣೆ ಎನಿಸುವಂತಹ ಒಂದು ನೈಜ ಘಟನೆಯ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ ಬನ್ನಿ ಇದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ.
ರಾಜೇಶ್ ಕಣ್ಣನ್ ಎನ್ನುವ ವ್ಯಕ್ತಿ ಅರಸಮರತೇರು ಎನ್ನುವ ತಮಿಳುನಾಡಿನ ಪ್ರದೇಶದಲ್ಲಿ ಜೀವನ ಮಾಡಿಕೊಂಡಿದ್ದವರು. ಮಣಿಮೇಕಲೈ ಎನ್ನುವ ಮಹಿಳೆಯನ್ನು ಇವರು ಮದುವೆ ಆಗಿರುತ್ತಾರೆ. ಒಬ್ಬ ಮಗಳು ಇಬ್ಬರು ಗಂಡು ಮಕ್ಕಳು ಸೇರಿದಂತೆ ಒಟ್ಟಾರೆ 3 ಜನ ಮಕ್ಕಳು ಇವರಿಗಿರುತ್ತಾರೆ. ಇವರು ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆಗಿರುತ್ತಾರೆ. ಹೀಗಾಗಿ ಸಾಮಾನ್ಯವಾಗಿ ಇವರ ಕೆಲಸದ ಕಾರಣದಿಂದಾಗಿ ಸಾಕಷ್ಟು ಸಮಯಗಳ ಕಾಲ ಹೊರಗಡೆಯೇ ಇರಬೇಕಾಗುತ್ತದೆ.
ಇವರ ಈ ವಿಚಾರವನ್ನು ಅವರ ಹೆಂಡತಿ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡು ಮಲೈಚಾಮಿ ಎನ್ನುವ ವ್ಯಕ್ತಿಯ ಜೊತೆಗೆ ಪರಿಚಯವನ್ನು ಮಾಡಿಕೊಂಡು ಬೇಡದ ಸಂಬಂಧವನ್ನು ಬೆಳೆಸಿಕೊಳ್ಳುತ್ತಾಳೆ. ಸಮಯ ಸಿಕ್ಕಾಗಲೆಲ್ಲಾ ಏಕಾಂತದಲ್ಲಿ ಡಿಂಗ್ ಡಾಂಗ್ ಆಟಗಳನ್ನು ಆಡಲು ಮಲೈಚಾಮಿ ಜೊತೆಗೆ ಇವಳು ಸೇರುತ್ತಿದ್ದಳು ಎಂಬುದು ಕೂಡ ತಿಳಿದುಬಂದಿದೆ.
ಈ ವಿಷಯ ಕಂಡಕ್ಟರ್ ಕೆಲಸವನ್ನು ಮಾಡುತ್ತಿದ್ದ ಗಂಡ ರಾಜೇಶ್ ಕಣ್ಣನ್ ರವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೂಡಲೇ ತನ್ನ ಹೆಂಡತಿ ಆಗಿರುವ ಮಣಿಮೇಗಲೈ ಗೆ ಎಚ್ಚರಿಕೆಯನ್ನು ನೀಡಿ ಅವಳ ಪ್ರಿಯತಮನಿಗೂ ಕೂಡ ಉಗಿದು ಉಪ್ಪು ಹಾಕಿದ್ದಾರೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಈ ಪ್ರೇಮಿಗಳು ಇವನನ್ನು ಮುಗಿಸಲೇಬೇಕೆಂದು ತೀರ್ಮಾನ ಮಾಡಿದ್ದಾರೆ.
ಆ ದಿನ ರಾತ್ರಿ ರಾಜೇಶ್ ಕಣ್ಣನ್ ಕೆಲಸ ಮುಗಿಸಿಕೊಂಡು ಬಂದಿದ್ದು ದನದ ಕೊಟ್ಟಿಗೆಯಲ್ಲಿ ನಿದ್ರಿಸಿದ್ದಾನೆ. ಇದನ್ನು ತನ್ನ ಪ್ರಿಯಕರನೊಂದಿಗೆ ಆತನ ಹೆಂಡತಿ ಇಬ್ಬರು ಸೇರಿ ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡು ಆತನ ತಲೆಯ ಮೇಲೆ ಭಾರದ ವಸ್ತುವನ್ನು ಎತ್ತಿ ಹಾಕಿದ್ದು, ಆತ ರ’ ಕ್ತದ ಮಡುವಿನಲ್ಲಿ ನರಳಾಡುತ್ತಿದ್ದ. ಕೂಡಲೇ ಆತನ ಕೂಗನ್ನೂ ಕೇಳಿ ಸಂಬಂಧಿಕರು ಓಡಿ ಬಂದಿದ್ದಾರೆ.
ರಾಜೇಶ್ ಕಣ್ಣನ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಆತ ಮರಣ ಹೊಂದಿದ್ದಾನೆ. ಕೂಡಲೇ ಅವನ ಸಂಬಂಧಿಕರು ನೀಡಿರುವ ದೂರಿನ ಆಧಾರದ ಮೇಲೆ ಮಣಿಮೇಕಲೈ ಹಾಗೂ ಆಕೆಯ ಪ್ರಿಯಕರನಾಗಿರುವ ಮಲೈಚಾಮಿಯನ್ನು ಹಿಡಿದು ಬಂಧಿಸಿಈ. ಮುಂದಿನ ದಿನಗಳಲ್ಲಿ ಇವರ ಮೇಲೇ ಯಾವ ರೀತಿಯಲ್ಲಿ ಶಿಕ್ಷೆ ಜರಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.