ಕೆಲವು ಘಟನೆಗಳನ್ನು ನೋಡಿದಾಗ ಹೀಗೂ ನಡೆಯುತ್ತಾ ಎಂದೆನಿಸುತ್ತದೆ. ಈಗಾಗಲೇ ನಮ್ಮ ಸುತ್ತ ಮುತ್ತಲಿನಲ್ಲಿ ಬೆಳಕಿಗೆ ಬರುವ ಕೆಲವು ಘಟನೆಗಳು ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡುತ್ತವೆ. ಪುಣೆ (Pune) ಯ ಕಾಟ್ರಾಜ್ -ದೇಹು ಸಮೀಪದ ನೆರೆ ಗ್ರಾಮದ ಬಳಿ ಪತ್ನಿಯನ್ನು ಹಗ್ಗದಿಂದ ಕ-ತ್ತು ಹಿಸುಕಿ ಕೊ-ಲೆಗೈದ 30 ವರ್ಷದ ವ್ಯಕ್ತಿ ಹಾಗೂ ಆತನ ಮೂವರು ಸಹಾಯಕರನ್ನು ಹಿಂಜೇವಾಡಿ ಪೊಲೀಸರು (Hinjevadi Police) ಭಾನುವಾರ ಬಂಧಿಸಿದ್ದರು.
ಈ ಘಟನೆಯ ಬೆನ್ನತಿ ಹೋದ ಪೊಲೀಸರಿಗೆ ಶಾ-ಕ್ ಕಾದಿತ್ತು.ಪೊಲೀಸರನ್ನು ದಾರಿ ತಪ್ಪಿಸುವ ಯತ್ನದಲ್ಲಿದ್ದ ದತ್ತಾ ವಸಂತ್ ಭೋಂಡ್ರೆ (Datta Vasanth Bhondre)ಅವರು ರಾತ್ರಿ 11.30 ರ ಸುಮಾರಿಗೆ ಹಿಂಜೆವಾಡಿ ಪೊಲೀಸರಿಗೆ ತಿಳಿಸಿದ್ದು, ಇಬ್ಬರು ಅಪರಿಚಿತ ಶಸ್ತ್ರಸಜ್ಜಿತರು ತನ್ನ ಪತ್ನಿ ಅಶ್ವಿನಿ (Ashwini) ಅನ್ನು ಕತ್ತು ಹಿಸುಕಿ ಕೊಂ-ದಿದ್ದಾರೆ ಮತ್ತು ಅವರ ಮಗ ಅನುಜ್ ಮೇಲೆ ಹಲ್ಲೆ ನಡೆಸಿ ದ-ರೋಡೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಚಿನ್ನಾಭರಣಗಳು, ಮೊಬೈಲ್ ಫೋನ್ ಮತ್ತು 1.30 ಲಕ್ಷ ರೂ. ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರ ಮುಂದೆ ಹೇಳಿದ್ದರು. ಹೌದು, 2014 ರಲ್ಲಿ ದತ್ತ ವಸಂತ ಮತ್ತು ಅಶ್ವಿನಿ ಪ್ರೇಮ ವಿವಾಹವಾಗಿದ್ದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದರು. ಅವರ ನಾಲ್ಕು ವರ್ಷದ ಮಗಳು ಅನುಷ್ಕಾ (Anushka) ತನ್ನ ಅಜ್ಜನ ಮನೆಗೆ ಹೋಗಿದ್ದಳು. ಈ ಭೋಂದ್ರೆಯವರು ಅ-ನೈತಿಕ ಸಂಬಂಧವನ್ನು ಹೊಂದಿದ್ದು ತನ್ನ ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿ ಹಾಗೂ ಮಗನ ಕಥೆ ಮುಗಿಸಲು ಪ್ಲಾನ್ ಮಾಡಿದ್ದರು.
ಅಶ್ವಿನಿ ಮತ್ತು ಇಬ್ಬರು ಮಕ್ಕಳನ್ನು ಕೊಲ್ಲಲು ಜವಾಲೆ ಸಂ-ಚು ರೂಪಿಸಿದ್ದು, ಗುತ್ತಿಗೆ ಹಂತಕರಾದ ಭೋರ್ (Bhor), ಜಾಧವ್ (Jadhav) ಮತ್ತು ಇನ್ನೊಬ್ಬ ವ್ಯಕ್ತಿಯ ಬಳಿ ಹೇಳಿ, ಇಡೀ ಅ-ಪರಾಧಕ್ಕು ತನಗೂ ಸಂಬಂಧವಿಲ್ಲ ಎನ್ನುವಂತೆ ಬಿಂಬಿಸಲು ಯತ್ನ ಮಾಡಿದ್ದನು.ಪತ್ನಿ ಹಾಗೂ ಮಗನನ್ನು ಮುಗಿಸಲು ಅವರಿಗೆ ಮುಂಗಡವಾಗಿ 50,000 ರೂ ನೀಡಿದ್ದು, ಉಳಿದ ಹಣವನ್ನು ಮತ್ತೆ ನೀಡುವುದಾಗಿ ಹೇಳಿಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದ ಅಶ್ವಿನಿ ಹ-ತ್ಯೆಗೆ ಸಂಚು ರೂಪಿಸಲಾಗಿತ್ತು.
ಆದರೆ ತನಿಖೆಯ ವೇಳೆ ಯಲ್ಲಿ ದತ್ತಾ ವಸಂತ್ ಭೋಂಡ್ರೆ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ಕೊನೆಗೂ ಆ-ರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ್ದ ಉಪ ಪೊಲೀಸ್ ಆಯುಕ್ತ (ವಲಯ III) ಗಣೇಶ್ ಶಿಂಧೆ (Ganesh Shindhe), “ನಾವು ಭೋಂಡೈ, ಅವರ ಗೆಳತಿ ಸೋನಾಲಿ ಜವಾಲೆ (Sonali Javale) ಮತ್ತು ಅವರ ಸಹಾಯಕರಾದ ಪ್ರಶಾಂತ್ ಜಗನ್ ಭೋರ್ (Prashanth Jagan Bhor) ಮತ್ತು ಪವನ್ ನಾರಾಯಣ ಜಾಧವ್ (Pavan Narayana Jadhav) ಅವರನ್ನು ಬಂಧಿಸಿದ್ದೇವೆ.
ಮತ್ತೊಬ್ಬ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಅವರಿಬ್ಬರು ಸಂಬಂಧದಲ್ಲಿದ್ದರು. ಭೋಂಡ್ರೆ ಅವರ ಫೋನ್ನಲ್ಲಿ ಇಬ್ಬರೂ ಮಹಿಳೆಯರೊಂದಿಗೆ ಚಾಟ್ಗಳಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ” ಎಂದಿದ್ದರು. ಅಶ್ವಿನಿ ಅವರ ಸೋದರ ಸಂಬಂಧಿ ಮೋಹನ್ ಶಿಂಧೆ (Mohan Shindhe) ಈ ಬಗ್ಗೆ ಮಾತನಾಡಿದ್ದು, ಅಶ್ವಿನಿಯ ಪೋಷಕರು ರೈತರು ಮತ್ತು ಹಿಂಜೆವಾಡಿ ಬಳಿಯ ಚಂದ್ಖೇಡ್ ಗ್ರಾಮದವರು.
ಭೋಂಡ್ರೆ ಯಿಂದ ಯಾವುದೇ ಕಿ-ರುಕುಳದ ಬಗ್ಗೆ ಅವಳು ಎಂದಿಗೂ ದೂರು ನೀಡಲಿಲ್ಲ. ಅವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದಳು. ಈ ಘಟನೆ ನಮಗೆ ಆ-ಘಾತ ತಂದಿದೆ ಎಂದಿದ್ದರು. ಒಟ್ಟಿನಲ್ಲಿ ಪತ್ನಿಯ ಕಥೆ ಮುಗಿಸಲು ಮುಂದಾದ ಪತಿಯೇ ಪೊಲೀಸರ ಅತಿಥಿಯಾಗಿದ್ದನು.