ಮನುಷ್ಯನ ಮನಸ್ಥಿತಿಯು ದಿನ ಕಳೆದಂತೆ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಸ್ನೇಹ ಪ್ರೀತಿಯಿಂದ ಇರುವ ಸ್ನೇಹಿತರನ್ನು ಕಂಡರೆ ದ್ವೇ-ಷ ಕೂಡ ಹುಟ್ಟುಬಹುದು. ಸಣ್ಣ ಪುಟ್ಟ ವಿಚಾರಗಳಿಂದ ದ್ವೇ-ಷದ ಭಾವನೆಯನ್ನು ಹುಟ್ಟುಹಾಕಿಕೊಂಡು ನಾನಾ ರೀತಿಯ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತೇವೆ. ಇಂತಹದೊಂದು ಘಟನೆಯು ಮದ್ಯ ಕರ್ನಾಟಕದ ಕೋಟೆನಾಡಿ (Madhya Karnataka Kotenadu) ನಲ್ಲಿ ನಡೆದಿದೆ. ಅಷ್ಟಕ್ಕೂ ಏನಿದು ಘಟನೆ ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಕಳೆದ ಒಂದೆರಡು ತಿಂಗಳ ಹಿಂದೆ ಅಂದರೆ ಜುಲೈ 22ರಂದು ಕೋಟೆನಾಡಿನ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೇ ಮೃ-ತದೇಹವೊಂದು ಪತ್ತೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಐಮಂಗಲ ಠಾಣೆ ಸಿಪಿಐ ಕಾಂತರಾಜ ತಂಡ (Imangala Station CPai Kantaraja Team) ವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಅಂದಹಾಗೆ, ಚಿತ್ರದುರ್ಗ(Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಚನ್ನಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ) ಬದಿಯಲ್ಲಿ ಪ-ತ್ತೆಯಾದ ಮೃ-ತದೇಹದ ಹಿಂದೆ ಪೊಲೀಸರು ತನಿಖೆ ನಡೆಸಲು ಶುರು ಮಾಡಿದರು. ಪ್ರಾರಂಭದಲ್ಲಿ ಇದೊಂದು ಹಿಟ್ ಅಂಡ್ ರನ್ (Hit And Run) ಎನ್ನುವಂತೆ ಕಂಡರೂ ಕೂಡ ಆಮೇಲೆ ಪೊಲೀಸರಿಗೆ ಅ-ನುಮಾನವೊಂದು ಶುರುವಾಯಿತು.
ತನಿಖೆ ಆರಂಭಿಸಿದ ಪೊಲೀಸರಿಗೆ ಮೃ-ತನ ಜೇಬಿನಲ್ಲಿ ಐಡಿ ಕಾರ್ಡ್ ಸಿಕ್ಕಿದ್ದು, ಈ ಮೃತನ ಸಂಬಂಧಿಕರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಚಾಮರಾಜನಗರದ ಹನೂರು (Chamarajanagara Hanuru) ಮೂಲದ ನಾಗೇಂದ್ರ (Nagendra) ಕೊ-ಲೆಯಾಗಿದ್ದಾನೆ ಎಂದು ಪೊಲೀಸರಿಗೆ ಪಕ್ಕಾ ಆಗಿದೆ.
ಅಂದಹಾಗೆ, ಈ ಘಟನೆಯ ಅಸಲಿ ಕಥೆಯು ಬೇರೇನೇ ಇದೆ. ಬೆಂಗಳೂರಿನ ಕಲ್ಲಿಪುರದಲ್ಲಿ ನಾಗೇಂದ್ರನು ಕೂಲಿ ಕೆಲಸ ಮಾಡಿಕೊಂಡಿದ್ದನು. ಈ ವೇಳೆಯಲ್ಲಿ ಯಾದಗಿರಿ ಮೂಲದ ಕಾರ್ಮಿಕ ರಾಜು (Yadagiri Raju) ಜೊತೆಗೆ ಆರು ತಿಂಗಳ ಹಿಂದೆ ಸ್ನೇಹ ಬೆಳೆದಿತ್ತು. ಆದರೆ ಈ ನಾಗೇಂದ್ರನು ರಾಜುನ ಪತ್ನಿ ಜೊತೆಗೆ ಸಂ-ಬಂಧ ಇಟ್ಟುಕೊಂಡಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆ ರಾಜು ಸ್ನೇಹಿತ ಮೇಲೆ ಕೋಪಗೊಂಡಿದ್ದನು.
ಕೊನೆಗೆ ರಾಜು ತನ್ನ ಸ್ನೇಹಿತರಾದ ಮಾಳಿಂಗರಾಯ (Malingaraya), ಶರಣು (Sharanu) ಜೊತೆಗೆ ಸೇರಿಕೊಂಡು ನಾಗೇಂದ್ರನ ಕಥೆ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದನು. ರಾಜು ಹಾಗೂ ನಾಗೇಂದ್ರನು ಹಣದ ವ್ಯವಹಾರವನ್ನು ನಡೆಸುತ್ತಿದ್ದನು. ಹೀಗಾಗಿ ಕೈಸಾಲ ಪಡೆದಿದ್ದು, ಐವತ್ತು ಸಾವಿರ ರೂಪಾಯಿ ವಾಪಸ್ ಕೊಡುವಂತೆ ರಾಜು ಹೇಳಿದ್ದು ತಾನು ಇರುವಲ್ಲಿ ಬರುವಂತೆ ಹೇಳಿದ್ದನು. ರಾಜು ಇರುವಲ್ಲಿಗೆ ಬಂದ ನಾಗೇಂದ್ರನ ತಲೆಗೆ ಕೋ-ಲಿನಿಂದ ಹೊಡೆದು ಕಥೆ ಮುಗಿಸಿದ್ದಾರೆ.
ಕೊನೆಗೆ ನಾಗೇಂದ್ರನ ಮೃ-ತದೇಹವನ್ನು ಮದ್ಯರಾತ್ರಿ ವೇಳೆ ಚನ್ನಮ್ಮನಹಳ್ಳಿ ಬಳಿ ಹೆದ್ದಾರಿ ಬದಿ ಎಸೆದು ರಾಜು ಹಾಗೂ ಅವನ ಸ್ನೇಹಿತರು ಪ-ರಾರಿಯಾಗಿದ್ದಾರೆ. ಆದರೆ ಈ ಚನ್ನಮ್ಮನಹಳ್ಳಿ (Channammanahalli) ಬಳಿ ನಡೆದಿದ್ದ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಗಳಾದ ರಾಜು, ಮಾಳಿಂಗರಾಯ ಮತ್ತು ಶರಣು ಮೂವರನ್ನೂ ಪೊಲೀಸರು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದ ಈ ಮೂವರು ಕಂ-ಬಿ ಎಣಿಸುತ್ತಿದ್ದಾರೆ.