Manjula and bhupati story : ತನ್ನ ಸಂಬಂಧಿಯಲ್ಲಿ ಒಬ್ಬಳಾದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ, ಆದರೆ ಈ ಯುವತಿಗೆ ಬೇರೆ ಹುಡುಗನ ಜೊತೆಗೆ ಎಂಗೇಜ್, ಈ ವಿಚಾರ ತಿಳಿಯುತ್ತಿದ್ದಂತೆ ಈ ಯುವಕನು ಏನು ಮಾಡಿದ್ದ ಗೊತ್ತಾ?.. ಮನುಷ್ಯನ ಮನಸ್ಥಿತಿಯೂ ಸಂಪೂರ್ಣವಾಗಿ ಬದಲಾಗಿದೆ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ. ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದಾಗ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಇತ್ತೀಚೆಗಿನ ಕಾಲಘಟ್ಟದಲ್ಲಿ ತನ್ನ ಸ್ವಾರ್ಥದಿಂದಾಗಿ ಸಂಬಂಧಗಳ ಮಹತ್ವವನ್ನು ಅರಿಯದ ಮಟ್ಟಿಗೆ ಬದಲಾಗಿದ್ದಾನೆ. ಮನುಷ್ಯನ ಆದ್ಯತೆಗಳು, ಆಯ್ಕೆಗಳು ಎಲ್ಲವೂ ಬದಲಾಗಿದೆ. ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಂತೆ ಆತನು ಯೋಚಿಸುವ ಪರಿಯೇ ಬದಲಾಗಿದೆ. ಮನುಷ್ಯನು ಸಂಬಂಧಗಳ ಮೌಲ್ಯವನ್ನು ತಿಳಿಯುವಲ್ಲಿ ಸೋತಿದ್ದಾನೆ. ತನ್ನೊಬ್ಬನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದಾನೆ.
ಹೀಗಾಗಿ ಆತನು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಬದಲಾಗಿ ಹಣ ಅಂತಸ್ತು, ಪ್ರತಿಷ್ಠೆಗಳಲ್ಲಿಯೇ ಮುಳುಗಿದ್ದಾನೆ. ತನ್ನ ಹುಟ್ಟಿನೊಂದಿಗೆ ಒಳಪಡುವ ಸಂಬಂಧಗಳನ್ನು ಹೊರತು ಪಡಿಸಿ, ಬೆಳೆಯುತ್ತ ಹೋದಾಗಲೆಲ್ಲಾ ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಹಾಗೂ ಪ್ರೀತಿ ಪ್ರೇಮಗಳು ಅರ್ಥ ಮಾತ್ರವಲ್ಲ ನಂಬಿಕೆಯನ್ನೇ ಕಳೆದುಕೊಂಡು ಬಿಟ್ಟಿವೆ.
ನಮ್ಮ ಸುತ್ತ ಮುತ್ತಲಿನಲ್ಲಿ ದುಡ್ಡಿಗಾಗಿ ಅಥವಾ ಪ್ರೀತಿಗಾಗಿ ನಡೆಯುವ ಕೆಲವೊಂದು ಘಟನೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಇಂತಹದ್ದೆ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಹತ್ತೊಂಬತ್ತು ವರ್ಷದ ಮಂಜುಳಾ ಎನ್ನುವ ಯುವತಿಯನ್ನು ಭೂಪತಿ ಎನ್ನುವ ಹುಡುಗನು ಪ್ರೀತಿಸುತ್ತಿದ್ದನು. ಈ ಮಂಜುಳಾ ಇಂಜಿನಿಯರ್ ಓದುತ್ತಿದ್ದು, ಭೂಪತಿಯೂ ಮಂಜುಳಾಳಿಗೆ ಸಂಬಂಧದಲ್ಲಿ ಭಾವ ಆಗಬೇಕು.
ಮನೆಯವರು ಇವರಿಬ್ಬರಿಗೂ ಮದುವೆ ಮಾಡುವುದಾಗಿ ಸಣ್ಣ ವಯಸ್ಸಿನಲ್ಲಿಯೇ ನಿರ್ಧಾರ ಮಾಡಿದ್ದರು. ಈ ಭೂಪತಿಯೂ ಮಂಜುಳಾಳ ಮೇಲೆ ಜೀವ ಇಟ್ಟಿದ್ದನು. ಮದುವೆಯಾದರೆ ಆಕೆಯನ್ನು ಮಾತ್ರ ಎಂದು ಡಿಸೈಡ್ ಮಾಡಿದ್ದನು. ಆದರೆ ಮಂಜುಳಾಳಿಗೆ ಭೂಪತಿಯ ಮೇಲೆ ಯಾವುದೇ ಪ್ರೀತಿಯ ಭಾವನೆ ಇರಲಿಲ್ಲ. ಅವಳು ಮಾತ್ರ ಬೇರೆ ಹುಡುಗನಿಗೆ ಮನಸ್ಸು ಕೊಟ್ಟಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಭೂಪತಿ ತೀರಾ ನೊಂದುಕೊಂಡಿದ್ದನು.
ತನಗೆ ಸಿಗದ ಮಂಜುಳಾ ಯಾರಿಗೂ ಸಿಗುವುದು ಬೇಡ ಎಂದು ನಿರ್ಧಾರ ಮಾಡಿಬಿಟ್ಟಿದ್ದ. ಹೀಗಿರುವಾಗ ಒಂದು ದಿನ ಮಂಜುಳಾಳನ್ನು ನಿನ್ನ ಜೊತೆಗೆ ಮಾತನಾಡುವುದಿದೆ ಎಂದು ಕರೆಸಿದ್ದನು. ಭೂಪತಿಯೂ ಕರೆದ ಎಂದು ಮಂಜುಳಾ ಕೂಡ ಆತನ ಮನೆಗೆ ಹೋಗಿದ್ದಳು. ಆದರೆ ಆತನು ಆಕೆಯ ಕಥೆ ಮುಗಿಸಿ, ಮನೆಯ ಸಂ-ಪಿಯಲ್ಲಿ ಹೆ-ಣವನ್ನು ಹಾಕಿದ್ದ.
ಇತ್ತ ಮಂಜುಳಾಳ ತಂದೆ ತಾಯಿಯರು ಮಗಳು ಕಾಣಿಸುತ್ತಿಲ್ಲ ಎಂದು ಗಾ-ಬರಿಗೊಂಡು ಪೊಲೀಸರಿಗೆ ದೂ-ರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ಭೂಪತಿಗೆ ಭ-ಯ ಶುರುವಾಗಿತ್ತು. ಹೀಗಾಗಿ ತಾನೇ ಪೊಲೀಸರ ಮುಂದೆ ಶರಣಾಗಿದ್ದನು. ಯುವತಿಯ ಕಥೆ ತೆಗೆಯಲು ಕಾರಣ ತಿಳಿಯುತ್ತಿದ್ದಂತೆ ಪೊಲೀಸರು ಶಾಕ್ ಆಗಿದ್ದು, ಹೆತ್ತ ತಂದೆ ತಾಯಿ ತನ್ನ ಮಗಳನ್ನು ಕಳೆದುಕೊಂಡು ನೋವಲ್ಲಿದ್ದರು.