Likhita and manju : ತನ್ನ ಹಾಗೂ ಪ್ರಿಯಕರ ಸಂಬಂಧಕ್ಕೆ ಪತಿಯೇ ವಿಲನ್ ಎಂದುಕೊಂಡ ಪತ್ನಿ, ಪ್ರಿಯಕರನ ಜೊತೆ ಸೇರಿ ಏನು ಮಾಡಿದ್ಲು ಗೊತ್ತಾ.. ಮಾನವನು ತನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದಾನೆ. ತನಗೆ ಬೇಕಾದ್ದನ್ನು ಪಡೆಯುವ ಬರದಲ್ಲಿ ತನ್ನ ಜೊತೆಗಿರುವ ಸಂಬಂಧಗಳನ್ನು ಮರೆಯುತ್ತಿದ್ದಾನೆ. ಹೀಗಾಗಿ ಮನುಷ್ಯನು ಸಂಬಂಧಗಳ ಮೌಲ್ಯವನ್ನು ಅರಿಯುವಲ್ಲಿ ಸೋತಿದ್ದಾನೆ.
ತನಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮನಸ್ಥಿತಿಗೆ ತಲುಪಿ ಬಿಟ್ಟಿದ್ದಾನೆ ಎನ್ನುವುದು ನಿಜಕ್ಕೂ ವಿಪರ್ಯಾಸ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಯೋಚನೆ ಮಾಡುವುದನ್ನು ಮರೆತು ಬಿಟ್ಟಿದ್ದಾನೆ.ತಾನು ಬದುಕುವುದಕ್ಕಾಗಿ ಇನ್ನೊಬ್ಬರ ಬದುಕನ್ನು ನಾ-ಶ ಮಾಡುವಷ್ಟು ಬದಲಾಗಿದ್ದಾನೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಕೊ-ಲೆ ದ-ರೋಡೆಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಕಾರಣ, ಒಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬ ವ್ಯಕ್ತಿಗೆ ನಂಬಿಕೆ ಇಲ್ಲವಾಗಿರುವುದು. ಅದಲ್ಲದೇ ಸಂಬಂಧಗಳಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ಸೋತಿರುವುದು. ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಅರ್ಥವೇ ಕಳೆದುಕೊಂಡು ಬಿಟ್ಟಿವೆ. ಸತಿ ಪತಿ ಇಬ್ಬರೂ ಹೊಂದಿಕೊಂಡು ಬದುಕುವ ಮನಸ್ಥಿತಿಯೂ ಇಲ್ಲ. ತಪ್ಪನ್ನು ತಿದ್ದುವ ಪರಿಯೂ ತಿಳಿದಿಲ್ಲ. ಸಾಲು ಸಾಲು ಮದುವೆ ಸಂಬಂಧಗಳು ಮುರಿದು ಬೀಳುತ್ತಿದೆ.
ಅದಲ್ಲದೇ ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು ಮೂರನೇ ವ್ಯಕ್ತಿಯ ಪ್ರವೇಶ ಸರ್ವೇ ಹೆಚ್ಚಾಗುತ್ತಲೇ ಇದೆ.ಈ ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಿನ ಬಿರುಕು ಕಂಡರೂ ವಿಚ್ಛೇಧನದ ಮೊರೆ ಹೋಗುವವರ ಸಂಖ್ಯೆಯೇ ಹೆಚ್ಚು. ಗಂಡ ಅಥವಾ ಹೆಂಡತಿ ಪರರ ಸಂಗ ಮಾಡಿ ಮೋ-ಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸಂಸಾರದಲ್ಲಿ ಇಂತಹ ಸಮಸ್ಯೆಗಳು ಬಂದಾಗ, ಕೊ-ಲೆಯಂತಹ ಕೃ-ತ್ಯಗಳಿಗೆ ಕೈ ಹಾಕುತ್ತಿದ್ದಾರೆ.
ಸುಖವಾಗಿ ಸಂಸಾರ ಮಾಡಬೇಕಾಗಿದ್ದ ಈ ಸಂಸಾರದಲ್ಲಿ ಮೂರನೇ ವ್ಯಕ್ತಿಯೂ ಎಂಟ್ರಿ ಕೊಟ್ಟಿದ್ದಾನೆ. ಈ ವೇಳೆಯಲ್ಲಿ ಪತಿ ಅಥವಾ ಪತ್ನಿಯೇ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಘಟನೆಯಲ್ಲಿ ನಡೆದದ್ದು ಇದೇ, ಸಂಸಾರದಲ್ಲಿ ಬಿರುಕು ಮೂಡಿದ್ದು ಪತ್ನಿಯೂ ದುಡುಕಿನ ನಿರ್ಧಾರವನ್ನು ಕೈಗೊಂಡಿದ್ದಾಳೆ.ತನ್ನ ಹಾಗೂ ಪ್ರಿಯಕರ ಸಂಬಂಧಕ್ಕೆ ಅಡ್ಡಿಯಾದ ಎನ್ನುವ ಕಾರಣಕ್ಕೆ ಈ ಕಟುಕ ಹೆಂಡತಿಯೂ ತನ್ನ ಪತಿಯ ಜೀವವನ್ನೇ ಬ-ಲಿ ತೆಗೆದುಕೊಂಡು ಬಿಟ್ಟಿದ್ದಾಳೆ.
ಮೈಸೂರಿನಲ್ಲಿ ಈ ಘಟನೆಯೂ ನಡೆದಿದ್ದು, ಕೊ-ಲೆಯಾದವನು ಹೊಟಗಳ್ಳಿಯ ಮಂಜು (37) ಎನ್ನುವ ವ್ಯಕ್ತಿ ಎನ್ನಲಾಗಿದೆ. ಮೈಸೂರಿನ ಬೋಗಾದಿ ನಿವಾಸಿ ಲಿಖಿತಾಳನ್ನು ಮಂಜು ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರೂ ಗಂಡು ಮಕ್ಕಳಿದ್ದರು. ಆದರೆ ಈ ಲಿಖಿತಾಳು ಈ ಹಿಂದೆ ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಳು. ಆದರೆ ಮನೆಯ ಹಿರಿಯರು ರಾಜಿ ಪಂಚಾಯತಿ ಮಾಡಿ ಮಂಜು ಕೈಗೆ ಸೇರಿದ್ದರು.
ಈ ವಿಚಾರವಾಗಿ ಲಿಖಿತಾ ಹಾಗೂ ಮಂಜು ನಡುವೆ ಜಗಳ ನಡೆಯುತ್ತಿತ್ತು.ಹೀಗಿರುವಾಗ ತಮ್ಮಿಬ್ಬರ ಸಂತೋಷಕ್ಕೆ ಮಂಜು ಅಡ್ಡಿಯಾಗುತ್ತಿದ್ದಾನೆಂದುಕೊಂಡು ಆತನ ಕಥೆಯನ್ನು ಮುಗಿಸಲು ಲಿಖಿತಾ ಹಾಗೂ ಆಕೆಯ ಪ್ರಿಯಕರ ಪ್ಲಾನ್ ರೂಪಿಸಿದ್ದಾರೆ. ಮಂಗಳವಾರ ರಾತ್ರಿ ಮಲಗಿದ್ದ ವೇಳೆಯಲ್ಲಿ ಮಂಜುವಿನ ಕ-ತ್ತು ಹಿ-ಸುಕಿ ಕಥೆ ಮುಗಿಸಿದ್ದಾರೆ.
ಆದರೆ ಬುಧವಾರ ಬೆಳಗ್ಗೆ ಪತಿಯೂ ಅನಾರೋಗ್ಯದಿಂದ ಪ್ರಾ-ಣ ಬಿಟ್ಟಿದ್ದಾನೆ ಎಂದು ನಾಟಕವಾಡಿದ್ದಾಳೆ. ಈ ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ವಿಜಯನಗರ ಪೊಲೀಸರು ಧಾವಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಿಖಿತಾಳನ್ನು ತನಿಖೆ ನಡೆಸುತ್ತಿದ್ದಾರೆ.
