ಸುತ್ತಾಡಲು ಕಾಡಿಗೆ ಹೋದ ಮುದ್ದಾದ ಜೋಡಿ, ಕೊನೆಗೆ ಕಾಡಿನಲ್ಲಿ ಹುಡುಗಿಗೆ ಆಗಿದ್ದು ಏನು ಗೊತ್ತಾ ನಿಜಕ್ಕೂ ದುರಂತ!!!

ಪ್ರೀತಿ (Love) ಯಲ್ಲಿ ಸುಲುಗೆ, ಮುನಿಸು, ಮನಸ್ತಾಪಗಳು ಸರ್ವೇ ಸಾಮಾನ್ಯ. ಆದರೆ ಈ ಪ್ರೀತಿಯಲ್ಲಿ ಬಿದ್ದ ಮೇಲೆ ಸಣ್ಣ ಪುಟ್ಟ ಮುನಿಸಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ಇಬ್ಬರ ನಡುವಿನ ಮುನಿಸಿನಿಂದ ದು-ಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಸರಿಯಿಲ್ಲ. ಆದರೆ ಈ ಪ್ರೇಮಿಗಳ ವಿಚಾರದಲ್ಲಿ ಹಾಗಾಗಿಲ್ಲ. ಪ್ರೀತಿಸುತ್ತಿದ್ದ ಈ ಜೋಡಿಯ ಬದುಕು ಜಗಳದಲ್ಲಿ ಅಂತ್ಯ ಕಂಡಿದೆ.

ಹೌದು ಇಬ್ಬರೂ ಪ್ರೇಮಿಗಳಿಬ್ಬರು ಆಂಧ್ರದಿಂದ ಕರ್ನಾಟಕದ ಗಡಿಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಲು ಬಂದಿದ್ದರು. ಸುತ್ತಾಡಿಕೊಂಡಿರುವ ಈ ಪ್ರೇಮಿಗಳ ನಡುವೆ ಉಂಟಾದ ಅದೊಂದು ಮ-ನಸ್ತಾಪವು ಈ ಜೋಡಿಯ ಬದುಕಿನ ಅಂತ್ಯಕ್ಕೆ ಕಾರಣವಾಗಿದೆ. ಸಣ್ಣ ಮು-ನಿಸಿನಿಂದಾಗಿ ಪ್ರಿಯಕರನೇ ಯುವತಿಯನ್ನು ಕೊ-ಲೆ ಮಾಡಿದ್ದಾನೆ ಎನ್ನಲಾಗಿದೆ ಹರ್ಷಿತ (Harshita) ಹಾಗೂ ಹೇಮಂತ್ (Hemanth) ಈ ಇಬ್ಬರೂ ಸಂಬಂಧಿಕರಾಗಿದ್ದು, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.

ಆದರೆ ಹೀಗಿರುವಾಗ ಕಳೆದ ಕೆಲವು ದಿನಗಳಹಿಂದೆಯಷ್ಟೇ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು (Kolar District Shreenivasapura Taluk) ಆಂಧ್ರದ ಗಡಿಯಲ್ಲಿರುವ ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ಬಂದಿದ್ದು, ಈ ವೇಳೆಯಲ್ಲಿ ಸಣ್ಣ ಕಾರಣಕ್ಕೆ ಈ ಇಬ್ಬರ ನಡುವೆ ಜ-ಗಳವೊಂದು ಆಗಿದೆ. ಕೋ-ಪದಿಂದ ಈ ಹೇಮಂತ್ ನು ಹರ್ಷಿತಾಳನ್ನು ಬಿಟ್ಟು ಅಲ್ಲಿಂದ ಹೊರಟು ಹೋಗಿದ್ದಾನೆ. ತನ್ನ ಪ್ರಿಯಕರನು ತನ್ನನ್ನು ಬಿಟ್ಟು ಹೋದ ಎಂದು ಕೋ-ಪಗೊಂಡು, ತನ್ನ ವೇಲ್​ನಲ್ಲಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ.

ಆದರೆ ಸ್ವಲ್ಪ ಸಮಯದ ನಂತರದಲ್ಲಿ ಹೇಮಂತ್ ವಾಪಸ್​ ನೋಡುವಷ್ಟರಲ್ಲಿ ಹರ್ಷಿತಾ ಸಾ-ವನ್ನಪ್ಪಿರುವುದು ಖಚಿತವಾಗಿದೆ. ಕಿ-ರುಚಾಡಿದ ಈ ಹೇಮಂತ್​ ಶ-ವವನ್ನು ಕೆಳಗಿಳಿಸಿದ್ದು ತನ್ನ ಪೊಷಕರಿಗೆ ಹಾಗೂ ರಾಯಲ್ಪಾಡು ಪೊಲೀಸ (Rayalpadu Police) ರಿಗೆ ಮಾಹಿತಿಯನ್ನು ನೀಡಿದ್ದಾನೆ.ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯು ನಡೆದಿದೆ.

ರಾಯಲ್ಪಾಡು ಪೊಲೀಸ್​ ಠಾಣಾ ವ್ಯಾಪ್ತಿಯ ಸುಣ್ಣಕಲ್ಲು ಅರಣ್ಯ ಪ್ರದೇಶ (Sunnakallu Forest) ದಲ್ಲಿ ಆಂಧ್ರದ ಪೀಲೇರು ಮೂಲದ ಯುವತಿಯೊಬ್ಬಳು ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆ ರಾಯಲ್ಪಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಆ ವೇಳೆಯಲ್ಲಿ ಹರ್ಷಿತ ಮೃ-ತ ದೇಹದ ಬಳಿಯಲ್ಲೇ ಹರ್ಷಿತ ಪ್ರಿಯಕರ ಹಾಗೂ ಸಂಬಂಧಿ ಹೇಮಂತ್ ಎಂಬುವನು ಸಿಕ್ಕಿದ್ದಾನೆ. ಆ ರಾತ್ರಿಯೇ ಶ-ವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ರಾಯಲ್ಪಾಡು ಪೊಲೀಸರು ಮೃತ ಹರ್ಷಿತ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಿಯಕರ ಹೇಮಂತ್​ನನ್ನು ವ-ಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆದರೆ ಹರ್ಷಿತಾ ಪೊಷಕರು ಮಾತ್ರ ಹೇಮಂತ್​ ಮೇಲೆ ಕೊ-ಲೆ ಆ-ರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಹೇಮಂತ್ ತಂದೆ ವಿರೋ-ದಿಸಿದ್ದು, ಹರ್ಷಿತಾ ಟ್ರಿಪ್​ ಹೋಗಬೇಕು ಎಂದು ಹೇಳಿದ ಹಿನ್ನೆಲೆ ಅವಳನ್ನು ಕರೆತಂದಿದ್ದ. ಆದರೆ ಅವರಿಬ್ಬರು ಇಲ್ಲಿಗೆ ಏಕೆ ಬಂದಿದ್ದರು ಅನ್ನೋದು ಗೊತ್ತಿಲ್ಲ. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ನನ್ನ ಮಗ ಕೊಲೆ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ಒಟ್ಟಿನಲ್ಲಿ ಪ್ರೀತಿ ಪ್ರೇಮದಲ್ಲಿನ ಸಣ್ಣ ಮುನಿಸು ಬದುಕಿನ ಅಂ-ತ್ಯಕ್ಕೆ ಕಾರಣವಾಗಿದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

Leave a Reply

Your email address will not be published. Required fields are marked *