ಪ್ರೀತಿ ಹೇಗೆ ಯಾವ ರೀತಿಯ ಪರಿಸ್ಥಿತಿಯನ್ನು ತಂದುಕೊಡಬಹುದು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಪ್ರೀತಿಯು ಬದುಕಿನಲ್ಲಿ ಕೆಲವೊಂದು ದು-ರಂತವನ್ನು ತಂದೊಡ್ಡಬಹುದು. ಇದಕ್ಕೆ ಈ ಘಟನೆಯೇ ಸಾಕ್ಷಿ ಎಂದರೆ ತಪ್ಪಾಗಲಾರದು. ಅವರಿಬ್ಬರೂ ನೋಡುವುದಕ್ಕೆ ಸುಂದರವಾಗಿಯೇ ಇದ್ದರು. ತನ್ನ ಸೌಂದರ್ಯದಿಂದಲೇ ಆ ಯುವಕನನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದಳು. ಆದರೆ ಆತನು ಕೊನೆಗೆ ಪ್ರೀತಿಯಲ್ಲಿ ಬಿದ್ದು ಬೀದಿ ಬದಿಯಲ್ಲಿ ಹೆ-ಣವಾಗಿದ್ದಾನೆ.
ಆ ಸುಂದರ ಮುಖದ ಯುವಕನು 35 ರ ಆಂಟಿಯನ್ನು ಪ್ರೀತಿಸಿದ್ದನು. ಆ ಆಂಟಿಗೆ ಆದಾಗಲೇ ಒಂದು ಮಗುವಿತ್ತು. ಈ ಒಂದು ಮಗುವಿನ ತಾಯಿಯ ಪ್ರೀತಿಗೆ ಬಿದ್ದ ಈ ಯುವಕನು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಆಭರಣವನ್ನು ಕಳೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಆಂಟಿಯ ಪ್ರೀತಿಯ ಜಾಲಕ್ಕೆ ಬಿದ್ದ ಈ ಯುವಕನು ಕೊಡಗು (Kodagu) ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮಕ್ಕೆ ಸೇರಿದವನು.
ಸರೋಜ (Saroja)+ ಎಂಬುವರ ಮಗ ಅಜಿತ್ ಗಣಪತಿ (Ajith Ganapati) ಯೇ ಪ್ರೀತಿಯಲ್ಲಿ ನಂಬಿ ಮೋ-ಸ ಹೋದವನು. ಗೋಣಿಕೊಪ್ಪಲಿ (Gonikoppali) ನಲ್ಲಿ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತಿದ್ದನು. ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ಜುಲೈ 2 ರಂದು ರಾತ್ರಿ ಗೋಣಿಕೊಪ್ಪದ ಮಾರುಕಟ್ಟೆಯ ಸಮೀಪದಲ್ಲಿಯೇ ವಿ-ಷ ಕುಡಿದು ಒದ್ದಾಡಿದ್ದಾನೆ.
ತಕ್ಷಣವೇ ಅಜಿತ್ ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ತನ್ನ ಸಹೋದರ ಭರತ್ ಸೋಮಯ್ಯ (Bharath Somayya)ನಿಗೆ ನನ್ನನ್ನು ಬದುಕಿಸಬೇಡಿ. ಬದುಕಿಸಿದರೂ ನಾಳೆ ಕಿರಣ್ ಗೌಡ (Kiran Gowda) ನನ್ನನ್ನು ಕೊ-ಚ್ಚಿಕೊ-ಲೆ ಮಾಡುತ್ತಾನೆ ಎಂದಿದ್ದಾನೆ. ಆತನ ಮಾತು ಕೇಳಿ ಸಹೋದರ ಭರತ್ ಸೋಮಯ್ಯ ಶಾಕ್ ಆಗಿದೆ. ಆದರೆ ಅಜಿತ್ ನನ್ನು ಮೈಸೂರು ಆ-ಸ್ಪತ್ರೆ (Mysore Hospital) ಗೆ ಕರೆದೊಯ್ದಿದಿದ್ದಾರೆ. ಆದರೆ ಅಜಿತ್ ಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಕೊನೆಗೆ ಕೊನೆಯುಸಿರು ಎಳೆದಿದ್ದಾನೆ.
ಅಜಿತ್ ಮನೆಯವರಿಗೆ ಮನೆಯ ಮಗನು ಈ ರೀತಿಯ ನಿರ್ಧಾರ ಮಾಡಲು ಕಾರಣ ಏನು ಎನ್ನುವ ಪ್ರಶ್ನೆಯೊಂದೆಡೆಯಾದರೆ, ಮಗನನ್ನು ಕಳೆದುಕೊಂಡ ನೋವು ಇನ್ನೊಂದೆಡೆ ಕಾಡಿದೆ. ಹೀಗಿರುವಾಗ ಅಜಿತ್ ತನ್ನ ಜೇಬಿನಲ್ಲಿಟ್ಟಿಕೊಂಡಿದ್ದ ಡೆತ್ ನೋಟ್ ನೋಡಿ ಎಲ್ಲರೂ ಶಾ-ಕ್ ಆಗಿದ್ದಾರೆ. ಕೊನೆಗೆ ಈ ಡೆ-ತ್ ನೋಟ್ (Death Note) ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಹೌದು, ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ ಇವಳ ಬದುಕಿಗೆ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮ (Binya Bojamma) ಎನ್ನುವವಳು ಎಂಟ್ರಿಯಾಗಿದ್ದಾಳೆ.
ಮೊದಲಿಗೆ ಇವರಿಬ್ಬರ ನಡುವೆ ಪರಿಚಯ ಶುರುವಾಗಿತ್ತು. ಕೊನೆಗೆ ಅಜಿತ್ ಹಾಗೂ ಬಿನ್ಯ ಬೋಜಮ್ಮ ಪ್ರೀತಿಸಲು ಶುರುವಿಟ್ಟಿದ್ದಾರೆ. ಈ ಯುವಕ ನನ್ನದೆಲ್ಲವೂ ನಿನ್ನದೆ, ನನ್ನ ಸರ್ವಸ್ವವೂ ನಿನ್ನದೆ ಎಂದು ಸರ್ವಸ್ವವನ್ನೂ ಆಕೆಗೆ ಧಾರೆ ಎರೆದಿದ್ದು, ತನ್ನ ಸಂಪಾದನೆಯ ಹಣವನ್ನು ಬಿನ್ಯ ಬೋಜಮ್ಮ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನ ಮನೆಯಲ್ಲಿದ್ದ ಚಿನ್ನ, ಆಸ್ತಿ ಪತ್ರಗಳನ್ನು ಗಿರಿವಿಟ್ಟು ಆಕೆಗೆ ಹಣ ನೀಡಿದ್ದಾನೆ.
ಅದಲ್ಲದೇ ಇತ್ತೀಚೆಗಷ್ಟೇ ಅಜಿತ್ ಗಣಪತಿ ಬೆಂಗಳೂರಿನಲ್ಲಿದ್ದಾಗ ಖರೀದಿಸಿದ್ದ ಕಾರನ್ನು ಮಾರಾಟ ಮಾಡಿದ್ದಾನಂತೆ. ಅದರ ಜೊತೆಗೆ ಸ್ನೇಹಿತರು ಸಂಬಂಧಿಕರ ಬಳಿಯಲೆಲ್ಲಾ 50 ಸಾವಿರ, ಲಕ್ಷ ಅಂತ ಸಾಲ ಮಾಡಿದ್ದನಂತೆ. ಆತನ ಸಾಲದ ಮಾಹಿತಿಯು ಅಜಿತ್ ಇಲ್ಲವಾದ ಬಳಿಕ ಬೆಳಕಿಗೆ ಬಂದಿದೆ. ಇದೀಗ ಅಜಿತ್ ತಾಯಿ ಸರೋಜ, ಎಲ್ಲವನ್ನು ಅವನು ಪ್ರೀತಿಸಿದವಳಿಗಾಗಿ ಸುರಿದು ನಮ್ಮನ್ನು ಬೀದಿಗೆ ನಿಲ್ಲಿಸಿ ಹೋಗಿದ್ದಾನೆ. ನಮಗೆ ಮೋ-ಸವಾಗಿದೆ, ನ್ಯಾಯಬೇಕು. ಇಲ್ಲದಿದ್ದರೆ ನಮಗೂ ಆತ್ಮಹತ್ಯೆಯೇ ಗತಿ’ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಅಜಿತ್ ಗಣಪತಿ ಅವರ ಕುಟುಂಬದವರು ಗೋಣಿಕೊಪ್ಪ ಪೊಲೀಸ್ ಠಾಣೆ (Gonikoppa Police Station) ಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಗೋಣಿಕೊಪ್ಪ ಪೊಲೀಸರು ಬಿನ್ಯ ಬೋಜಮ್ಮ ಮತ್ತು ಕಿರಣ್ ಗೌಡನನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಈ ಪ್ರ-ಕರಣವನ್ನು ಕೈಗೆತ್ತಿಕೊಂಡ ಪೊಲೀಸರು ನಿಜವಾಗಿಯೂ ಅಜಿತ್ ಗಣಪತಿಗೆ ಯಾರಿಂದ ಮೋ-ಸ ಆಗಿದೆ ಎನ್ನುವ ಸತ್ಯ ಹೊರ ಬರಬೇಕಾಗಿದೆ.