ಬದುಕು ನಾವು ಅಂದುಕೊಂಡಷ್ಟು ಸುಲಭವು ಇಲ್ಲ. ಬೇರೆಯವರ ಜೀವನ ಹಾಳು ಮಾಡಿ ತಾವು ಸಂತೋಷವಾಗಿರುತ್ತೇವೆ ಎಂದು ಕೊಂಡಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಆದರೆ ತನ್ನ ಸ್ವಾರ್ಥಕ್ಕಾಗಿ ವ್ಯಕ್ತಿಯೊಬ್ಬನ ಜೀವ ತೆಗೆಯುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಇಂತಹದೊಂದು ಘಟನೆಯು ಬೆಳಕಿಗೆ ಬಂದಿದೆ.
ಹೌದು, ಕರೂರು (Karuru) ಸಮೀಪದ ಅರಣ್ಯದಲ್ಲಿ ಡಿಎಂಕೆ ನಗರಸಭಾ ಸದಸ್ಯಳನ್ನು ಹ-ತ್ಯೆಗೈದು ಟೀ ಅಂಗಡಿ ನಡೆಸುತ್ತಿದ್ದ ದಂಪತಿಯನ್ನು ಬಂ-ಧಿಸಿರುವ ಘಟನೆಯೊಂದು ನಡೆದಿದೆ. ರೂಪಾ (Roopa) ಎನ್ನುವ ಮಹಿಳೆಯೂ ಈರೋಡ್ ಜಿಲ್ಲೆ (Erod District) ಯ ಕೊಡುಮುಡಿ (Kodumudi) ಪಕ್ಕದ ಚೋಳಕಲಿಪಾಳ್ಯಂ ಗ್ರಾಮಕ್ಕೆ ಸೇರಿದವರಾಗಿದ್ದು, ಇವರ ಪತಿಯು ತಂಗರಸು ಕರಿಬೇವಿನ ಅಂಗಡಿ ನಡೆಸುತ್ತಿದ್ದಾರೆ.

ರೂಪಾ ಈರೋಡ್ ಜಿಲ್ಲೆಯ ಚೆನ್ನಸಮುತ್ರಂ ಪುರಸಭೆಯ ಡಿಎಂಕೆ ಕೌನ್ಸಿಲರ್ (DMK Councilar) ಆಗಿದ್ದಳು. ಅದಲ್ಲದೇ ಈ ರೂಪಾ ಕರೂರಿನ ಜವಳಿ ರಫ್ತು ಕಂಪನಿಯ ಮಾಲೀಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಒಂದೆರಡು ದಿನಗಳ ಹಿಂದೆ ಈ ರೂಪಾ ಮನೆಯಿಂದ ಹೊರಟು ಕರೂರಿಗೆ ಬಂದಿದ್ದಾಳೆ. ಆದರೆ ಕೆಲಸ ಮುಗಿಸಿ ಮನೆಗೆ ಬಂದಿರಲಿಲ್ಲ.
ಹೀಗಿರುವಾಗ ತಂಗರಾಜ್ (Tangaraj) ತನ್ನ ಪತ್ನಿಯ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಕೊಡುಮುಡಿ ಪೊಲೀಸ್ ಠಾಣೆ (Kodumudi Police Station) ಯಲ್ಲಿ ರೂಪಾಳ ಮಗ ದೂ-ರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಲು ಮುಂದಾದರು. ಈ ವೇಳೆ ಬಾಲಮಲೈ ಸಮೀಪದ ಕಾಡಿ (Near Balamalai Forest) ನಲ್ಲಿ ತಲೆಗೆ ತೀ-ವ್ರ ಪೆಟ್ಟಾಗಿರುವ ಮಹಿಳೆಯ ಅ-ರೆಬೆತ್ತಲೆ ಶ-ವವು ಪೊಲೀಸರಿಗೆ ಸಿಕ್ಕಿತು.
ಈ ವೇಳೆಯಲ್ಲಿ ಪರಮತಿ ಪೊಲೀಸರು ಸ್ಥಳಕ್ಕಾಗಮಿಸಿ ಮೃ-ತದೇಹವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (Karuru Government Medical College Hospital) ಗೆ ರವಾನಿಸಿದ್ದಾರೆ. ಮೃ-ತ ವ್ಯಕ್ತಿ ರೂಪಾ ಎಂದು ಗುರುತಿಸಿಲಾಗಿದ್ದು, ಈ ಬಗ್ಗೆ ರೂಪಾ ಅವರ ಮನೆಯವರಿಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣ ಹಿಂದಿರುವ ಅಸಲಿ ವ್ಯಕ್ತಿಗಳು ಯಾರೆಂದು ಬೆಳಕಿಗೆ ಬಂದಿದೆ.ಈ ಘಟನೆಯ ಬಳಿಕ ಪೊಲೀಸರು ಡಿಎಂಕೆ ಕೌನ್ಸಿಲರ್ ಗಂ-ಭೀರ ತನಿಖೆ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಗಮನಿಸಿದ್ದಾರೆ. ಈ ವೇಳೆಯಲ್ಲಿ ಕರೂರ್ ಜಿಲ್ಲೆಯ ನೋಯಲ್ (Noyal) ನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ದಂಪತಿಗಳು ರೂಪಾ ಅವರನ್ನು ಹ-ತ್ಯೆಗೈದಿರಬಹುದು ಎನ್ನುವ ಅನುಮಾನವೊಂದು ಪೊಲೀಸರಿಗೆ ಬಂದಿದೆ.
ಕೊನೆಗೆ ಆ ದಂಪತಿಯನ್ನು ತನಿಖೆಗೆ ಒಳ ಪಡಿಸಿದಾಗ ತಾವೇ ಕೊ-ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೌದು, ಈ ರೂಪಾ ತಲೆಗೆ ಕ-ಲ್ಲೆಸೆದು ಕೊ-ಲೆ ಮಾಡಿದ್ದು, ಸಾ-ಲದ ಸಮಸ್ಯೆಯಿಂದ ರೂಪಾ ಅವರನ್ನು ಕೊಂ-ದು ಚಿನ್ನಾಭರಣ ದೋ-ಚಿದ್ದಾರೆ ಎನ್ನುವ ವಿಚಾರವು ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ರೂಪಾ ಧರಿಸಿದ್ದ 5 ಪೌಂಡ್ ಮೌಲ್ಯದ ಚಿನ್ನಾಭರಣಗಳನ್ನು ವ-ಶಪಡಿಸಿಕೊಳ್ಳಲಾಗಿದ್ದು, ಈ ದಂಪತಿಯನ್ನು ಪೊಲೀಸರು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.