Kqruppaswamy and his wife : ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸುಖಮಯವಾಗಿರಬೇಕು ಮತ್ತು ಜೀವನ ಸಂಗಾತಿಯೊಂದಿಗೆ ಇಡೀ ಜೀವನ ಸಂತೋಷದಿಂದ ಕಳೆಯಬೇಕು. ಆದರೆ ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ವೈವಾಹಿಕ ಜೀವನ ಸುಖಮಯವಾಗಿರುವುದು ಮೊದಲಿನಷ್ಟು ಸುಲಭವಾಗಿಲ್ಲ. ದಾಂಪತ್ಯ ಜೀವನದಲ್ಲಿ ಪರಸ್ಪರ ಸಮನ್ವಯದ ಕೊರತೆ, ಅನುಮಾನಗಳು, ತಿಳುವಳಿಕೆಯ ಕೊರತೆ ಇತ್ಯಾದಿಗಳಿಂದ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗುತ್ತಿದೆ.. ದಿನ ಕಳೆದಂತೆ ಆಕ್ರಮ ಸಂಬಂಧಗಳು ಹೆಚ್ಚಾಗುತ್ತಿದೆ.
ಕರುಪ್ಪಸಾಮಿ (36) ತೂತುಕುಡಿ ಜಿಲ್ಲೆಯ ಒಟ್ಟಪಿಡಾರಂ ಪಕ್ಕದ ಗ್ರಾಮದವರು. ಅವರ ಪತ್ನಿ ಕನಕಲಕ್ಷ್ಮಿ, ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ವಿದೇಶಿ ಟ್ರಕ್ ಡ್ರೈವರ್ ಆಗಿರುವ ಕರುಪ್ಪಸಾಮಿ ಕೆಲಸಕ್ಕೆ ಹೋದರೆ ಒಂದೆರಡು ತಿಂಗಳ ನಂತರವೇ ಮನೆಗೆ ಮರಳುತ್ತಿದ್ದನು. ಆತನಿಗೂ ವಿಪರೀತ ಕುಡಿತದ ಚಟ. ಇದರಿಂದ ಆಗಾಗ ಜಗಳವಾಡಿ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ.
ಮದುವೆಯಾಗಿ ಎರಡು ಗಂಡು ಮಕ್ಕಳಿದ್ದರೂ ಕೂಡ ಗಂಡ ಬೇರೊಬ್ಬನ ಹೆಂಡತಿಯ ಜೊತೆ ಮಲಗುತ್ತಿದ್ದ ವಿಷಯ ತಿಳಿದು ಅರಗಿಸಿಕೊಳ್ಳಲಾಗದೆ ಹೆಂಡತಿ ಮಾಡಿದ್ದೇನು ಗೊತ್ತಾ!! ನಿಜಕ್ಕೂ ಮನಕಲಕುತ್ತದೆ!!!!
ಹೀಗಿರುವಾಗ ಮೂರು ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದ ಕರುಪ್ಪಸ್ವಾಮಿ ಕಳೆದ ವರ್ಷ ಆ.7ರಂದು ಪೇರೂರಾಣಿ ಗ್ರಾಮಕ್ಕೆ ಬಂದಿದ್ದನು. ಆ ರಾತ್ರಿ ಹೆಂಡತಿ ಮಕ್ಕಳೊಂದಿಗೆ ಊಟ ಮಾಡಿ ಹೊರಗೆ ಮಲಗಿದ್ದನು. ಆದರೆ ಮರುದಿನ ಬೆಳಗ್ಗೆ ಕತ್ತು ಹಿಸುಕಿ, ಎದೆಗೆ ಇರಿದ ಸ್ಥಿತಿಯಲ್ಲಿ ಕರುಪ್ಪಸ್ವಾಮಿ ಶ- ವವಾಗಿ ಪತ್ತೆಯಾಗಿದ್ದು, ಸಂಬಂಧಿಕರು ತಟ್ಟಪಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಕರುಪ್ಪಸ್ವಾಮಿ ಅವರ ಪತ್ನಿ ಕನಕಲಕ್ಷ್ಮಿ ಮೇಲೆ ಅನುಮಾನ ಬಂದಿತ್ತು. ತದನಂತರದಲ್ಲಿ ತನಿಖೆಯಿಂದ ನಂಬಲಾರಾದ ವಿಚಾರವೊಂದು ಬೆಳಕಿಗೆ ಬಂದಿದೆ.
ಅಂದಹಾಗೆ, ಕರುಪ್ಪಸ್ವಾಮಿ ಕೆಲಸದ ನಿಮಿತ್ತ ಹೋಗುತ್ತಿದ್ದನು. ಹೀಗಾಗಿ ಎರಡೆರಡು ತಿಂಗಳ ನಂತರ ಮನೆಗೆ ಬರುತ್ತಿದ್ದ… ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಪರಿಣಾಮ ಕನಕಲಕ್ಷ್ಮಿ ಚೋಳಪುರಂನ ಸಂಬಂಧಿ ಚಾಲಕ ರವಿಚಂದ್ರನ್ ಸ್ನೇಹಮಯ ಸಂಬಂಧವಿತ್ತು. ಹೀಗಾಗಿ ಕನಕಲಕ್ಷ್ಮಿಗೆ ರವಿಚಂದ್ರನ್ ಆಗಾಗ ಸಣ್ಣಪುಟ್ಟ ಉಪಕಾರ ಮಾಡುತ್ತಿದ್ದನು.
ಈ ಕಾರಣದಿಂದ ಇವರಿಬ್ಬರೂ ಫೋನ್ ನಲ್ಲಿ ಮಾತನಾಡಲು ಶುರು ಮಾಡಿದರು. ಅದು ವಿಕೋಪಕ್ಕೆ ತಿರುಗಿ ಕರುಪ್ಪಸ್ವಾಮಿ ಊರ ಹೊರಗೆ ಹೋದಾಗಲೆಲ್ಲ ಖಾಸಗಿಯಾಗಿ ಭೇಟಿಯಾಗುತ್ತಿದ್ದರು..ಈ ವಿಷಯ ಕರುಪ್ಪಸ್ವಾಮಿಗೆ ತಿಳಿದ ತಕ್ಷಣ ಕರುಪ್ಪಸ್ವಾಮಿ ಪತ್ನಿಗೆ ಛೀಮಾರಿ ಹಾಕಿದ್ದು, ದೊಡ್ಡ ಜಗಳವಾಗಿತ್ತು. ಆದಾದ ಬಳಿಕ ಕನಕಲಕ್ಷ್ಮಿ ಈ ವಿಷಯವನ್ನು ಕಲ್ಲಕಡಲನ್ ರವಿಚಂದ್ರನ್ ಗೆ ತಿಳಿಸಿದ್ದಳು.
ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದ ಕನಕಲಕ್ಷ್ಮಿ ಪತ್ನಿಯು ಮನೆಗೆ ಬಂದಿದ್ದನು. ಹೀಗಿರುವಾಗ ಕನಕಲಕ್ಷ್ಮಿ ರವಿಚಂದ್ರನ್ ಗೆ ಕರೆ ಮಾಡಿ , ಆ7ರಂದು ಮನೆಗೆ ಬಂದಿದ್ದ ಕರುಪ್ಪಸ್ವಾಮಿ ಹೊರಗೆ ಮಲಗಿದ್ದನ್ನು ತಿಳಿಸಿದ್ದಳು. ಇದಾದ ಬಳಿಕ ಅಲ್ಲಿಗೆ ಬಂದ ರವಿಚಂದ್ರನ್ ಚಾಕುವಿನಿಂದ ಕರುಪ್ಪಸ್ವಾಮಿಯ ಕತ್ತು ಸೀ-ಳಿ ಎದೆಗೆ ಇರಿದು ಪರಾರಿಯಾಗಿದ್ದನು. ಕೊನೆಗೂ ತನಿಖೆಯ ವೇಳೆ ಸತ್ಯ ಬಯಲಾಗಿದ್ದು, ಪೊಲೀಸರು ಕೊ-ಲೆ ಮಾಡಿದ ರವಿಚಂದ್ರನ್ ಹಾಗೂ ಇದಕ್ಕೆ ಸಹಕರಿಸಿದ ಕನಕಲಕ್ಷ್ಮಿಯನ್ನು ಬಂಧಿಸಿದ್ದಾರೆ.