ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ನಿಜಕ್ಕೂ ತಿಳಿಯದು. ಕೆಲವೊಮ್ಮೆ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಗಮನಿಸಿದಾಗ ನಂಬಿಕೆಗೆ ಅರ್ಥವಿಲ್ಲ ಎನಿಸುತ್ತದೆ. ಆಗ್ರಾದ ಎಸ್ಎನ್ ಮೆಡಿಕಲ್ ಕಾಲೇಜಿ (Agra SN Medical College) ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ವಿವೇಕ್ ತಿವಾರಿ (Dr. vivek Tivari) ಅವರು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆಗ್ರಾದ ಆಸ್ತ್ರೆಯಲ್ಲಿ ಯೋಗಿತಾ (Yogitha) ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಬದುಕಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಈ ವೈದ್ಯೆಯ ಬದುಕಿನಲ್ಲಿ ನಡೆದಿದ್ದೇನು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಡಾ. ಯೋಗೀತಾ ಗೌತಮ್ ಅವರನ್ನು ಮದುವೆ (Marriage) ಯಾಗುವಂತೆ ಒತ್ತಡ ಏರುತ್ತಿದ್ದ ಡಾ ವಿವೇಕ್ ತಿವಾರಿಯೇ ಆಕೆಯ ಕಥೆ ಮುಗಿಸಿದ್ದಾನೆ. ಡಾ ವಿವೇಕ್ ತಿವಾರಿ ತಪ್ಪೊಪ್ಪಿಗೆಯ ವೀಡಿಯೊ (Video) ವೊಂದು ವೈರಲ್ ಆಗುತ್ತಿದ್ದು, ಸದ್ಯಕ್ಕೆ ಆತನು ತಾನು ಮಾಡಿರುವ ಕೆಲಸದ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಡಾ ವಿವೇಕ್ ತಿವಾರಿ ಉತ್ತರ ಪ್ರದೇಶದ ಜಲೌನ್ (Uttara Pradesha Jaloul) ನಲ್ಲಿ ವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡಿದ್ದನು. ಆದರೆ ಈ ಘಟನೆಯಾದ ಬಳಿಕ ಮಂಗಳವಾರ ಡಾ ಯೋಗಿತಾ ಅವರನ್ನು ಭೇಟಿ ಮಾಡಲು ಆಗ್ರಾಕ್ಕೆ ತೆರಳಿದ್ದಾಗಿ ತಪ್ಪೊಪ್ಪಿಕೊಂಡಿರುವುದು ವಿಡಿಯೋದಲ್ಲಿದೆ ಸಂಜೆ 6:30 ರ ಸುಮಾರಿಗೆ ಯೋಗಿತಾಳನ್ನು ಕರೆದುಕೊಂಡು ಹೋದೆ. ತಾನು ಮತ್ತು ಡಾ ಯೋಗಿತಾ ಕಳೆದ 7 ವರ್ಷಗಳಿಂದ ಸಂಬಂಧ ಹೊಂದಿದ್ದೇವೆ. ಯೋಗಿತಾ ಎಸ್ಎನ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಡಾ ಯೋಗಿತಾ ಅವರ ಕಾರಿನಲ್ಲಿ ಕುಳಿತಾಗ ನನ್ನ ಹಾಗೂ ಆಕೆಯ ನಡುವೆ ತೀವ್ರ ವಾ-ಗ್ವಾದ ನಡೆಯಿತು, ನಂತರ ಕೋ-ಪದ ಭರದಲ್ಲಿ ನಾನು ಅವರ ಕತ್ತು ಹಿ-ಸುಕಿದೆ ಎಂದಿದ್ದಾನೆ. ಆದರೆ ಯೋಗಿತಾಳನ್ನು ಕತ್ತು ಹಿಸುಕಿ ಸಾ-ಯಿಸಿದ ನಂತರ ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದ ಚಾ-ಕುವನ್ನು ತೆಗೆದುಕೊಂಡು ಅವಳ ತಲೆಗೆ ಹಲವು ಬಾರಿ ತಿ- ವಿದಿದ್ದಾನೆ, ಆಕೆ ಮೃ-ತಪಟ್ಟಿದ್ದಾಳೆ ಎಂದು ಖಚಿತಪಡಿಸಿಕೊಂಡ ಬಳಿಕ ಶವವನ್ನು ಏಕಾಂತ ಸ್ಥಳಕ್ಕೆ ಕೊಂಡೊಯ್ದು ಕಾಡಿನಲ್ಲಿ ಬಚ್ಚಿಟ್ಟಿದ್ದಾನೆ ಎನ್ನುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾನೆ.
ಹೀಗಿರುವಾಗ ಆಗ್ರಾದ ದೌಕಿ ಪೊಲೀಸ್ ಠಾಣೆ (Agra Dowki Police Station) ವ್ಯಾಪ್ತಿಯ ಬಮ್ರೌಲಿ ಕತ್ರಾ ಪ್ರದೇಶ (Bamrali Katra place) ದ ಮೈದಾನದಲ್ಲಿ ಡಾ ಯೋಗಿತಾ ಅವರ ಶ-ವವು ಸಿಕ್ಕಿದೆ. ದೇಹದ ಮುಖ ಮತ್ತು ತಲೆಯ ಮೇಲೆ ಗಾ-ಯದ ಗುರುತುಗಳಿವೆ ಎನ್ನಲಾಗಿದೆ. ಆಕೆ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು, ಮೃ-ತದೇಹದಿಂದ ಯಾವುದೇ ಸಾಕ್ಷಿಗಳು ಪತ್ತೆಯಾಗಿಲ್ಲ. ಆದರೆ ಆಕೆಯ ಮೊಬೈಲ್ ಫೋನ್ ಕೂಡ ನಾ-ಪತ್ತೆಯಾಗಿತ್ತು.
ಅದಲ್ಲದೇ ಏಕಾಏಕಿ ಡಾ. ಯೋಗಿತಾರವರು ನಾ-ಪತ್ತೆಯಾಗಿದ್ದರು. ಹೀಗಾಗಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದರು. ಹೀಗಿರುವಾಗ ಮಂಗಳವಾರ ಸಂಜೆಯ ವೇಳೆಗೆ ಆಗ್ರಾದ ಎಂಎಂ ಗೇಟ್ ಪೊಲೀಸ್ ಠಾಣೆ (Agra MM Gate Police Station)ವ್ಯಾಪ್ತಿಯ ನೂರಿ ದರ್ವಾಜಾ ಪ್ರದೇಶ (Nuri Darvaja Place) ದಲ್ಲಿ ಯೋಗಿತಾ ಅವರು ಬಾಡಿಗೆ ಮನೆಯಿಂದ ನಾ-ಪತ್ತೆಯಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿತ್ತು.
ಅದಾದೆ ಆಕೆಯ ಫೋನ್ ಕೂಡ ಸಂಪರ್ಕಕ್ಕೆ ಬರದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಅದಲ್ಲದೇ ಡಾ ವಿವೇಕ್ ತಿವಾರಿ ಅವರ ಮೇಲೆ ಅ-ನುಮಾನ ಇರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದರು. ಅದಲ್ಲದೇ, ಕೆಲವು ವರ್ಷಗಳಿಂದ ತಿವಾರಿ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ.
ಯೋಗಿತಾ ಅವರನ್ನು ಮದುವೆಯಾಗುವಂತೆ ಮನವೊಲಿಸಲು ತಿವಾರಿ ಕೂಡ ಕರೆ ಮಾಡಿ ಬೆ-ದರಿಕೆ ಹಾಕಿದ್ದರು ಮಗಳನ್ನು ಮನವೊಲಿಸಲು ವಿಫಲವಾದರೆ ಗಂ-ಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎ-ಚ್ಚರಿಕೆ ನೀಡಿದ್ದನು ಎಂದು ಈ ವೈದ್ಯೆಯ ತಂದೆ ಅಂಬೇಷ್ ಕುಮಾರ್ ಆರೋಪಿಸಿದ್ದರು. ಯೋಗಿತಾ ಗೌತಮ್ ಎಂಬ ಕಿರಿಯ ವೈದ್ಯೆಯ ಕೊ-ಲೆ ಪ್ರಕರಣದಲ್ಲಿ ವೈದ್ಯರನ್ನು ಬಂಧಿಸಲಾಗಿದ್ದು, ಯೋಗಿತಾ ಗೌತಮ್ ಳನ್ನು ವಿವೇಕ್ ತಿವಾರಿ ಇಷ್ಟ ಪಡುತ್ತಿದ್ದನು.
ಆದರೆ ಆಕೆಯು ಒಪ್ಪದ ಕಾರಣ ಆಕೆಯ ಕಥೆಯನ್ನು ಮುಗಿಸಿರುವುದಾ ಗಿ ಒಪ್ಪಿಕೊಂಡಿದ್ದಾರೆ. ಮೃತ ಯೋಗಿತಾಳ ಮ-ರಣೋತ್ತರ ಪರೀಕ್ಷೆಯ ವರದಿಯು ಡಾ ಯೋಗಿತಾ ಸಾಯುವ ಮೊದಲು ತನ್ನನ್ನು ಉಳಿಸಿಕೊಳ್ಳಲು ಒದ್ದಾಡಿದ್ದಾಳೆ ಎನ್ನುವುದು ತಿಳಿದು ಬಂದಿದೆ. ಪ್ರೀತಿ ಹಾಗೂ ಮದುವೆಯ ಆಸೆಗೆ ಬಿದ್ದ ಈ ವೈದ್ಯನು ಡಾ.ಯೋಗಿತಾಳ ಜೀ-ವ ತೆಗೆಯುವ ಮಟ್ಟಕ್ಕೆ ತಲುಪಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.