ಪ್ರೀತಿಸಿದ ಹುಡುಗಿ ಮೇಲೆ ಅನುಮಾನ, ಹಿಂದೆ ಮುಂದೆ ನೋಡದೆ ಈತ ಮಾಡಿದ್ದೇನು ಗೊತ್ತಾ? ಪ್ರೀತಿ ಮಾಡುವ ಮುಂಚೆ ಯೋಚಿಸಿ, ನೋಡಿ!!

ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನ ಆದ್ಯತೆಗಳು, ಆಯ್ಕೆಗಳು, ಮನಸ್ಥಿತಿ ಎಲ್ಲವೂ ಬದಲಾಗಿ ಬಿಟ್ಟಿವೆ. ವಿದ್ಯಾವಂತನಾಗಿದ್ದರೂ ಕೂಡ ಸಂಬಂಧದ ಮೌಲ್ಯವು ತಿಳಿಯುತ್ತಿಲ್ಲ. ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದು, ಸಮಾಜದಲ್ಲಿ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಹಿಂದೆಯಷ್ಟೇ ಯುವಕನೊಬ್ಬ ತನ್ನ ಗೆಳತಿಯ ಮೇಲೆ ಅನುಮಾನ ಪಟ್ಟು ಕೊಡಲಿಯಿಂದ ಹ-ತ್ಯೆಗೈದಿದ್ದನು.

ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ತನ್ನ ಗೆಳತಿಯ ವಾಟ್ಸಾಪ್ ಅನ್ನು ಹ್ಯಾಕ್ ಮಾಡಿದ ನಂತರದಲ್ಲಿ ಯುವಕನು ತನ್ನ ಗೆಳತಿಗೆ ಬೇರೆಯವರ ಜೊತೆಗೆ ಸಂಬಂಧವಿದೆ ಎಂದು ಎಂದು ನಂಬಿದ್ದನು ಎಂದು ವರದಿಯಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಸೇತುವೆಯೊಂದರ ಬಳಿ ಯುವತಿಯ ಶ-ವ ಪತ್ತೆಯಾದಾಗ ಈ ವಿಚಾರವು ಬೆಳಕಿಗೆ ಬಂದಿತ್ತು.

ನಂತರ ಪೊಲೀಸರನ್ನು ಕರೆಸಲಾಗಿತ್ತು. ಘಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಈ ಬಗ್ಗೆ ತನಿಖೆ ಆರಂಭಿಸಿದ್ದರು. ಮೃ-ತ ಪಟ್ಟ ಯುವತಿಯನ್ನು 24 ವರ್ಷದ ದೇವಕಿ ಚಕ್ರೇಶ್ ಕಥೆ ಎಂದು ಗುರುತಿಸಲಾಗಿತ್ತು. ಪೊಲೀಸರು ಕೊಡಲಿ, ಸ್ಕೂಟರನ್ನು ವಶಪಡಿಸಿಕೊಂಡಿದ್ದರು. ಈ ವಿಚಾರವನ್ನು ಅಧಿಕಾರಿಗಳು ನಡೆದ ವಿಷಯವನ್ನು ಮೃ-ತ ಯುವತಿಯ ಕುಟುಂಬಕ್ಕೆ ತಿಳಿಸಿದ್ದರು.

ತದನಂತರದಲ್ಲಿ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮನೋಜ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ದೇವಕಿ ಸಂಬಂಧ ಹೊಂದಿದ್ದಳು ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಹೀಗಿರುವಾಗ ಪೊಲೀಸರು ಕುಮಾರ್‌ಗಾಗಿ ಹುಡುಕಾಟ ಆರಂಭಿಸಿದ್ದರು.ಆತನನ್ನು ಪತ್ತೆ ಹ-ಚ್ಚಿದ ಮೇಲೆ ಕುಮಾರ್‌ನನ್ನು ವ-ಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಯುವತಿಯ ಕಥೆ ಮುಗಿಸಿರುವುದಾಗಿ ಕುಮಾರ್ ಒಪ್ಪಿಕೊಂಡಿದ್ದನು. ಅದಲ್ಲದೇ, ತನಗೂ ದೇವಕಿಗೂ ನಾಲ್ಕು ವರ್ಷಗಳಿಂದ ಸಂಬಂಧವಿತ್ತು. ದೇವಕಿ ಮೊದಲಿಗಿಂತ ಸ್ವಲ್ಪ ಭಿನ್ನವಾಗಿಯೇ ವರ್ತಿಸುತ್ತಿದ್ದಳು.

ಹೀಗಾಗಿ ಮನೋಜ್ ಕುಮಾರ್‌ಗೆ ದೇವಕಿಯ ಮೇಲೆ ಅ-ನುಮಾನ ಶುರುವಾಗಿತ್ತು. ಹೀಗಿರುವಾಗ ಮನೋಜ್ ಕುಮಾರ್ ತನ್ನ ಗೆಳತಿಯ ವಾಟ್ಸಾಪ್ ಅನ್ನು ಹ್ಯಾ-ಕ ಮಾಡಿ ಇನ್ನೊಬ್ಬ ವ್ಯಕ್ತಿಗೆ ಆಕೆಯ ಸಂದೇಶಗಳನ್ನು ಪತ್ತೆ ಮಾಡಿದೆ. ಹೀಗಾಗಿ ಆಕೆಯ ಜೀ-ವ ತೆಗೆಯಲು ಮುಂದಾದೆ ಎಂದು ಪೊಲೀಸರಿಗೆ ತಿಳಿಸಿದ್ದನು.

ಒಂದು ದಿನ ದೇವಕಿಯೊಂದಿಗೆ ಮಾತನಾಡುತ್ತಾ, ಶಾಪಿಂಗ್ ಟ್ರಿಪ್‌ಗಾಗಿ ರಾಯಪುರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದನು. ಅದರಂತೆ ಮನೋಜ್ ಕುಮಾರ್ ದೇವಕಿಯ ಜೊತೆಗೆ ತೆರಳುತ್ತಿದ್ದ ವೇಳೆಯಲ್ಲಿ ವಾಹನ ನಿಲ್ಲಿಸಿ ಕೊಡಲಿಯನ್ನು ಹೊರತೆಗೆದು ದೇವಕಿಯನ್ನು ಹೊಡೆದು ಜೀ-ವ ತೆ’ಗೆದಿದ್ದನು. ತಕ್ಷಣಕ್ಕೆ ಕೊ-ಡಲಿಯನ್ನು ಎ-ಸೆದು ತನ್ನ ಸ್ಕೂಟರ್‌ನಲ್ಲಿ ಸ್ಥಳದಿಂದ ಪ-ರಾರಿಯಾಗಿದ್ದನು. ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಕರೆ ಮಾಡಿದ್ದರು. ಮನೋಜ್ ಕುಮಾರ್ ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *