ಸಿನಿಮಾ ಲೋಕ ಬಣ್ಣ ಬಣ್ಣದ ಕನಸು ಹೊತ್ತು ಕೊಂಡು ಬಂದವರಿಗೆ ಈ ಲೋಕ ಸುಂದರವಾಗಿಯೇ ಕಾಣುತ್ತದೆ. ಹೌದು ಈ ಲೋಕದಲ್ಲಿ ಅದೆಷ್ಟೋ ನಟ ನಟಿಯರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕೆಲವರಿಗೆ ಈ ಬಣ್ಣದ ಲೋಕವು ಸಾಲು ಸಾಲು ಅವಕಾಶಗಳ ಮೂಲಕ ತೆರೆ ಮೇಲೆ ಮಿಂಚಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇನ್ನು ಕೆಲವು ಕಲಾವಿದರು ಅವಕಾಶದಿಂದ ವಂಚಿತರಾಗಿ ಸಿನಿ ಬದುಕಿನಿಂದ ದೂರ ಉಳಿದಿದ್ದಾರೆ.
ಒಮ್ಮೆ ನಟ ನಟಿಯರು ಚಿತ್ರರಂಗದಿಂದ ದೂರ ಉಳಿದು ಬಿಟ್ಟರೆ ಮತ್ತೆ ಕೆಲವರು ತೆರೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆ. ಕೆಲವೊಮ್ಮೆ ಸಿನಿ ಬದುಕಿನಿಂದ ದೂರ ಉಳಿದವರನ್ನು ಸಿನಿ ಲೋಕವು ಮರತೇ ಬಿಡುತ್ತದೆ. ಹೌದು, ಸ್ಯಾಂಡಲ್ನಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಹಿರಿಯನಟರಾಗಿರುವ ಅಭಿಜಿತ್ ಅವರಿಗೆ ಅವಕಾಶಗಳು ಕಡಿಮೆಯಾದಾಗ ಸಿನಿ ಬದುಕಿನಿಂದ ಅಂತರ ಕಾಯ್ದುಕೊಂಡರು.
ಚಂದನವನದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಸುಮಾರು ಮೂವತ್ತೆಂಟು ವರ್ಷಗಳ ಸಿನಿ ಬದುಕಿನಲ್ಲಿ ಸಕ್ರಿಯರಾದವರು. ಅಭಿಜಿತ್ ಕನ್ನಡ ಚಿತ್ರರಂಗದ ಸಕ್ರಿಯವ ನಟ, ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕ. 80 ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಜಿತ್ ಅವರು ನಾಯಕ ನಟ, ಖಳನಾಯಕನಾಗಿ ಮತ್ತು ಪೋಷಕ ನಟನಾಗಿ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು.
ಶಾಲಾದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಬೆಳೆದ ಮೇಲೆ ಊರು ತೊರೆದು ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದರು. ಹಲವು ನಿರ್ದೇಶಕರ ಬಳಿ ಅವಕಾಶಕ್ಕಾಗಿ ಸುತ್ತಾಡಿದ ಮೇಲೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ನಟ ಅಭಿಜಿತ್ ಅವರು ಸಂಸಾರದ ಗುಟ್ಟು, ಶಾಂತಿ ನಿವಾಸ, ಜನ ನಾಯಕ ಮುಂತಾದ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿದರು.
1990 ರಲ್ಲಿ ತೆರೆಕಂಡ ಕಾಲೇಜ್ ಹೀರೋ ಮತ್ತು ತದನಂತರ ತೆರೆಕಂಡ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದರು. 1993 ರಲ್ಲಿ ತೆರೆಕಂಡ ರಂಜಿತಾ ಚಿತ್ರದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿತು. ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಸಹೋದರನಾಗಿ ನಟಿಸಿದ ಪಾತ್ರ ಇವರಿಗೆ ದೊಡ್ಡ ಮಟ್ಟಿಗಿನ ಬ್ರೇಕ್ ನೀಡಿತು.
ಹೀಗಿರುವಾಗ ನಿರ್ಮಾಣದತ್ತ ನಟ ಅಭಿಜಿತ್ ಅವರು ಮುಖ ಮಾಡಿದರು. 2005 ರಲ್ಲಿ ಸಮರ ಸಿಂಹ ನಾಯಕ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಸಿನಿಮಾವು ಸೋಲು ಕಂಡಿತು. ತದನಂತರದಲ್ಲಿ ಅಂದರೆ 2009 ರಲ್ಲಿ ರಾಮಕುಮಾರ್ ನಾಯಕನಾಗಿ ನಟಿಸಿದ `ಜೋಡಿ ನಂ 1′ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಮಾತ್ರವಲ್ಲದೆ ಬಂಡವಾಳ ಹೂಡಿದರು.
ಹೀಗೆ ಬೆಳ್ಳಿತೆರೆಯಲ್ಲಿ ತನ್ನದೇ ಹೆಜ್ಜೆ ಸೃಷ್ಟಿಸಿದ ಇವರು ಬೆಳ್ಳಿ ತೆರೆ ಮಾತ್ರವಲ್ಲದೇ, ಕಿರುತೆರೆಯಲ್ಲೋ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಅಕ್ಷರಮಾಲೆ ಎಂಬ ಗಾಯನ ಸ್ಫರ್ಧೆಯ ನಿರೂಪಕರಾಗಿದ್ದರು. ಬರೋಬ್ಬರಿ ಹನ್ನೆರೆಡು ವರ್ಷಗಳ ಕಾಲ ಕಾರ್ಯಕ್ರಮ ನೆಡೆಸಿ ಕೊಟ್ಟರು. ಆದರೆ ಸುಮಾರು ಏಳೆಂಟು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಿದ್ದು,ಕಳೆದ ವರ್ಷ ಕಿರುತೆರೆಯ ಪರದೆಯ ಮೇಲೆ ಕಾಣಸಿಕೊಂಡಿದ್ದಾರೆ.
ತದನಂತರದ ದಿನಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಹೋದಂತೆ ಸಿನಿಮಾರಂಗದಿಂದ ದೂರ ಉಳಿದರು. ಏಳೆಂಟು ವರ್ಷಗಳಿಂದ ಅವಕಾಶಕ್ಕಾಗಿ ಕಾದು ಕುಳಿತಿದ್ದ ಇವರಿಗೆ, ಕಳೆದ ವರ್ಷ ಇವರನ್ನು ಅವಕಾಶಗಳು ಹುಡುಕಿಕೊಂಡು ಬಂದಿದೆ. ಚಿತ್ರರಂಗದಿಂದ ದೂರ ಉಳಿದಿದ್ದ ಹಿರಿಯ ನಟ ಅಭಿಜತ್ರವರು 2020, ನನ್ನ ಚಿತ್ರರಂಗದ ಬದುಕಿನ ಎರಡನೇ ಇನ್ನಿಂಗ್ಸ್ ಎಂದು ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೇ, ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸರಸು ಧಾರಾವಾಹಿಯ ಮೂಲಕ ಪಾತ್ರವನ್ನು ಮಾಡುತ್ತಾ ತೆರೆ ಮೇಲೆ ರೀ ಎಂಟ್ರಿ ಕೊಟ್ಟಿದ್ದರು. ಸದ್ಯಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲೂ ಪಾತ್ರವನ್ನು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶಗಳು ಅಭಿಜಿತ್ ಪಾಲಿಗೆ ಬಂದಿದೆ