ಪ್ರೀತಿಗೆ ಜಾತಿ ಭಾಷೆ ಯಾವುದು ಬೇಕಾಗಿಲ್ಲ, ಎರಡು ಮನಸ್ಸುಗಳು ಇದ್ದರೆ ಸಾಕು. ಅದರಲ್ಲಿಯು ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ದಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ ಘಟನೆಗಳು ಇದೆ. ಆದರೆ ಇದೀಗ ಯುವತಿಯನ್ನು ಪ್ರೀತಿಸಿ ಮದುವೆ (Love Marriage) ಯಾಗಲು ರೆಡಿಯಾಗಿದ್ದು, ಮಂಟಪದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಅಲ್ಲಿಂದ ಎ-ಸ್ಕೇಪ್ ಆಗಿದ್ದಾನೆ.
ಈ ಘಟನೆಯು ನಡೆದಿರುವುದು ಬೆಂಗಳೂರಿನ ಪಿಣ್ಯಾ (Banglore Pinya) ದ ದುಗ್ಗಾಲಮ್ಮ ದೇವಾಲಯ (Duggalamma Temple)ದಲ್ಲಿ ಎನ್ನಲಾಗಿದೆ. ಯುವತಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿ (Private Company) ಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದಳು. ಈ ಗಜೇಂದ್ರ (Gajendra) ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಗಜೇಂದ್ರ ಯುವತಿಗೆ ದೂರದ ಸಂಬಂಧಿ ಎನ್ನಲಾಗಿದೆ.
ಹೀಗಿರುವಾಗ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವತಿ ಹಾಗೂ ಗಜೇಂದ್ರನಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪರಿಚಯವಾಗಿದ್ದು, ಈ ಪರಿಚಯ ಪ್ರೀತಿ ಚಿಗುರಿದೆ.ಕಳೆದ ಎರಡು ವರ್ಷಗಳಿಂದ ಯುವತಿಯೊಂದಿಗೆ ಸುತ್ತಾಡಿದ್ದು, ಮದುವೆಯಾಗುತ್ತೇನೆ. ನನ್ನ ಪ್ರಾಣ ಎಂದು ಹೋಟೆಲ್ ಲಾಡ್ಜ್ ಗೆ ಕರೆದೊಯ್ದು ಲೈಂ-ಗಿಕವಾಗಿ ಬಳಸಿಕೊಂಡಿದ್ದನು.
ಈ ಹಿಂದೆ ಪ್ರೀತಿಸಿದ ಹುಡುಗಿಗೆ ಕೈಕೊಡಲು ಮುಂದಾಗಿದ್ದನು. ಈ ವಿಚಾರವಾಗಿ ತುಮಕೂರು ಮಹಿಳಾ ಪೊಲೀಸ್ ಠಾಣೆ (Ladies Police Station) ಗೆ ದೂರು ನೀಡಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯವರು ಕರೆಸಿ ಇಬ್ಬರು ಮದುವೆಯಾಗುವಂತೆ ಬುದ್ಧಿ ಮಾತು ಹೇಳಿ ಕಳಿಸಿದ್ದರು.ಅಷ್ಟೇ ಅಲ್ಲದೇ ಠಾಣೆಯಲ್ಲಿ ಈ ಗಜೇಂದ್ರನು ಯುವತಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದನು.
ಆ ಬಳಿಕ ಇವರಿಬ್ಬರ ಮದುವೆಗೆ ಎಲ್ಲಾ ತಯಾರಿ ನಡೆದಿದ್ದು, ಮದುವೆಯ ದಿನ ಈ ಗಜೇಂದ್ರನು ಪ-ರಾರಿಯಾಗಿದ್ದಾನೆ. ಬೆಂಗಳೂರಿನ ಪಿಣ್ಯಾದ ದುಗ್ಗಾಲಮ್ಮ ದೇವಾಲಯದಲ್ಲಿ ಇಬ್ಬರ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ಅರ್ಧದಲ್ಲಿಯೇ ಈ ಗಜೇಂದ್ರನು ಎ-ಸ್ಕೇಪ್ ಆಗಿದ್ದು ಯುವತಿ ಹಾಗೂ ಯುವತಿಯ ಕುಟುಂಬಸ್ಥರಿಗೆ ಶಾ-ಕ್ ನೀಡಿದೆ.
ಇತ್ತ ಯುವತಿಯು ಪ್ರಿಯಕರನು ಅರ್ಧದಲ್ಲೇ ಕೈಕೊಟ್ಟಿದ್ದು ಕಂಗಲಾಗಿದ್ದು, ಎರಡೂವರೆ ವರ್ಷಗಳಿಂದ ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ಲೈಂ-ಗಿಕವಾಗಿ ಬಳಸಿಕೊಂಡಿದ್ದು, ಮೋ-ಸ ಮಾಡಿ ಪ-ರಾರಿಯಾಗಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಈ ಸಂಬಂಧ ಆತನ ವಿರುದ್ಧ ಮಹಿಳಾ ಪೊಲೀಸ್ ಠಾಣೆ ಯಲ್ಲಿ ಮತ್ತೆ ಪ್ರಕರಣ ದಾಖಲಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ತ-ನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಫೇಸ್ ಬುಕ್ ಪ್ರೀತಿಯನ್ನು ನಂಬುವ ಮುನ್ನ ಸ್ವಲ್ಪ ಜೋಕೆ.