ಸ್ಯಾಂಡಲ್ವುಡ್ ನಲ್ಲಿ ಒಬ್ಬ ಹೀರೊ ಎಷ್ಟು ಹಿಟ್ ಸಿನೆಮಾ ಕೊಟ್ಟಿರಬಹುದು ಆದರೆ ಒಂದು ಪ್ಲಾಪ್ ಕೊಟ್ಟರೆ ಮುಗಿಯಿತಿ. ಅಲ್ಲಿಗೆ ಅವನ ಸಿನೆಮಾ ಕರಿಯರ್ ಮುಗಿಯಿತು ಎಂದು ಹೇಳುತ್ತಾರೆ ನಂತರ ಅವರು ಯಶಸ್ಸು ಪಡೆಯುವುದು ಅಷ್ಟು ಸುಲಭವಾಲ್ಲ ಹಾಗಾಗಿ ನಿರಂತರವಾಗಿ ಯಶಸ್ವಿಗೆ ಹೋರಾಡುತ್ತಾಲೇ ಇರಬೇಕಾಗಿತ್ತಾದೆ. ತೆಲುಗು ಹೀರೊಗಳ ಮೊದಲ ಸಿನೆಮಾ ಹಿಟ್ ಆಗುತ್ತದೆ. ಶಿವರಾಜ್ ಕುಮಾರ್ ಅವರ ಮೊದಲ ಮೂರು ಸಿನೆಮಾಗಳು ಹಿಟ್ ಆಗಿದ್ದವು.
ನಂತರ ಅವರ ನೂರು ಸಿನೆಮಾಗಳಲ್ಲಿ ಎಷ್ಟು ಸಿನೆಮಾಗಳು ಪ್ಲಾಫ್ ಆಗಿದ್ದವು. ಆದರೂ ಆಗೊಮ್ಮೆ ಈಗೊಮ್ಮೆ ಹಿಟ್ ಸಿನೆಮಾಗಳನ್ನು ನೀಡುತ್ತಾರೆ. ಆದ್ದರಿಂದಲೇ ಅವರು ನಿರಂತರವಾಗಿ ಸಿನೆಮಾಗಳಲ್ಲಿ ಅಭಿಯಿಸುತ್ತಿದ್ದಾರೆ. ಒಂದಿಷ್ಟು ಹಿಟ್ ಸಿನೆಮಾಗಳನ್ನು ನೀಡದಿದ್ದರೆ ಸಿನೆಮಾರಂಗದಲ್ಲಿ ಅವರಿಗೆ ಬೆಲೆ ಇರುವುದಿಲ್ಲ. ಓಡುವ ಕುದುರೆಯನ್ನು ಎಲ್ಲರೂ ಹಿಂಬಾಲಿಸುತ್ತಾರೆ. ಯಾವುದೇ ಸಿನೆಮಾ ಹೆಚ್ಚಾದರೆ ಸಾಕು ಆ ಸಿನೆಮಾವನ್ನು ನಿರ್ದೇಸಿದ ನಿರ್ದೇಶಕರ ಬೆಲೆ ಹೆಚ್ಚಾಗುತ್ತದೆ ಹೀರೋಗಳಿಗೂ ಕೂಡ ಒಳ್ಳೆಯ ಮಾರ್ಕೆಟ್ ಬರುತ್ತದೆ.
ಆದರೆ ಒಂದು ಸಿನೆಮಾ ಅಥವಾ ಎರಡು ಮೂರು ಸಿನೆಮಾಗಳು ಪ್ಲೇಸ್ ಆದರೆ ಇದ್ದಕಿದಂತೆ ಹೀರೋಗಳ ಮಾರ್ಕೆಟ್ ಕಡಿಮೆಹಾಗುತ್ತದೆ. ಹಾಗಾಗಿ ಹೀರೋ ಆದವರು ಒಂದು ಸಿನೆಮಾ ಪ್ಲೇಸ್ ಆದರೆ ಕೂಡಲೇ ಇಚ್ಛೆತ್ತುಕೊಳ್ಳಬೇಕು. ಧನಂಜಯ್ ಅವರು ಆರಂಭದಲ್ಲಿ ಒಂದೆರಡು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಅದರೆ ಇವರ ಎರಡು ಮೂರು ಸಿನೆಮಾಗಳು ಪ್ಲಾಪ್ ಆದವು. ಅಲ್ಲಿಗೆ ಅವರ ಸಿನೆಮಾ ಕೇರಿಯರ್ ಮುಗಿಯಿತು ಎಂದು ಜನ ಮಾತನಾಡಿಕೊಂಡರು.
ಬಹಳಷ್ಟು ಸಮಯ ಧನಂಜಯ್ ಅವರಿಗೆ ಯಾವುದೇ ಆಫರ್ ಇರಲಿಲ್ಲ. ಸ್ವಲ್ಪ ಸಮಯ ಅವರು ಉದ್ಯಮದಲ್ಲಿ ದೂರವಾಗಿದ್ದರು. ಆದರೆ ಟಗರು ಸಿನೆಮಾದಿಂದ ಅವರು ಕಮ್ ಬ್ಯಾಕ್ ಆದರು. ಟಗರು ಸಿನೆಮಾದಲ್ಲಿ ಅವರು ಡಾಲಿ ಪಾತ್ರ ಮಾಡಿದ್ದರು. ಈಗ ಅವರು ಡಾಲಿ ಧನಂಜಯ್ ಎಂದೇ ಪ್ರಸಿದ್ಧರಾಗಿದ್ದಾರೆ. ಡಾಲಿ ಪಾತ್ರ ಅವರಿಗೆ ಮರುಜನ್ಮ ನೀಡಿತು. ಶ್ರೀಮುರಳಿ ಅವರ ಮೊದಲು ಸಿನೆಮಾ ಹಿಟ್ ಆಗಿತ್ತು.
ಆದರೆ ಬರುತ್ತ ಬರುತ್ತಾ ಸಾಲು ಸಾಲು ಸಿನೆಮಾಗಳು ಸೋತು ನಂತರ ಅವಕಾಶಗಳಿಲ್ಲದೆ. ಅವರ ಸಿನೆಮಾ ಪಯಣ ಮುಗಿಯಿತು ಎಂದು ಹಲವು ಜನರು ಮಾತಾಡಿಕೊಂಡಿದ್ದರು. ಶ್ರೀಮುರಳಿ ಅವರು ಸಿನಿ ಕರಿಯರ್ ಮುಗಿಯಿತು ಎಂದು ಉದ್ಯಮದವರು ಮಾತಾಡಿಕೊಳ್ಳುತ್ತಿದ್ದರು. ಆದರೆ ಬಹಳ ಸಮಯದ ನಂತರ ಉಗ್ರಂ ಸಿನೆಮಾದ ಮೂಲಕ ಅವರು ಕಮ್ ಬ್ಯಾಕ್ ಆದರು. ದುನಿಯಾ ವಿಜಯ್ ಅವರ ದುನಿಯಾ ಸಿನೆಮಾ ಹಿಟ್ ಆಗಿತ್ತು.
ನಂತರ ಅವರ ಹಾದಿ ಸುಲಭವಾಗಿರಲಿಲ್ಲ ಒಂದೆರಡು ಸಿನೆಮಾಗಳು ಹಿಟ್ ಆದರೆ ಇನ್ನೊಂದೆರಡು ಪ್ಲಾಪ್ ಆಗುತ್ತಿದ್ದವು. ಕೊನೆಕೊನೆಗೆ ಅವರ ಸಿನೆಮಾಗಳು ಗೆಲುವೇ ಕಾಣದೆ ಸೋಲು ಕಂಡವು. ಈ ಸಮಯದಲ್ಲಿ ಅವರೇ ಒಂದು ಚಿತ್ರವನ್ನು ಡೈರೆಕ್ಟರ್ ಮಾಡಲು ನಿರ್ಧರಿಸಿದರು. ಸಲಗ ಚಿತ್ರವನ್ನು ಅವರು ಡೈರೆಕ್ಟ್ ಮಾಡಿದರು. ಇದೇ ಚೀದಲ್ಲಿ ಅವರು ನಾಯಕನಗಿಯೂ ಅಭಿನಯಿಸಿದರು. ಸಲಗ ಚಿತ್ರ ಅವರಿಗೆ ಮರು ಜನ್ಮ ನೀಡಿತ್ತು.
ಆರಂಭದಲ್ಲಿ ದರ್ಶನ್ ಅವರು ಸಿನೆಮಾಗಳು ಹಿಟ್ ಆಗುತ್ತಿದ್ದವು. ಆದರೆ ಬರುಬರುತ್ತಾ ಅವರ ಒಂದೆರಡು ಸಿನೆಮಾಗಳು ಫ್ಲಾಪ್ ಆಗಿ ದರ್ಶನ್ ಅವರಿಗೆ ಮಾರ್ಕೆಟ್ ಕುಸಿದು ಬಿದ್ದಿದೆ ಎಂದು ಹೇಳಲಗುತ್ತಿತ್ತು. ದರ್ಶನ್ ಅಭಿನಯದ ಮೂರ್ನಾಲ್ಕು ಸಿನೆಮಾಗಳು ಫ್ಲಾಪ್ ಆಗುತ್ತಿದ್ದಂತೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಬಂದವು. ಅದೇ ಸಮಯದಲ್ಲಿ ಬಿಡುಗಡೆಯದ ಗಜ ಹಾಗೂ ಸಾರಥಿ ಸಿನೆಮಾಗಳು ಅವರಿಗೆ ಮರುಜನ್ಮ ನೀಡಿದವು.
ಜಗ್ಗೇಶ್ ಅವರ ಚಿತ್ರಗಳು ಮಿನಿಮಮ್ ಗ್ಯಾರಂಟಿ ಎನ್ನುವ ಹೆಸರು ಪಡೆದಿದ್ದವು. ಆದರೆ ಹೋಗುತ್ತಾ ಹೋಗುತ್ತಾ. ಎಲ್ಲಾ ಸಿನೆಮಾಗಳು. ಸೋತು ಸುಣ್ಣ ಆದವು. ಇದರಿಂದ ಜಗ್ಗೇಶ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಬಂತು. ಆದರೆ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಅವರು ಕಮ್ ಬ್ಯಾಕ್ ಆದರು. ಸುದೀಪ್ ಅವರು ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ.
ಇವರ ಅಭಿನಯದ ಕೆಲವು ಸಿನೆಮಾಗಳು ಫ್ಲಾಪ್ ಆದಾಗ ಅವರಿಗೆ ಮರು ಜನ್ಮ ನೀಡಿದ್ದು ಕೆಂಪೇಗೌಡ ಸಿನೆಮಾ ಈ ಸಿನೆಮಾ ಕಿಚ್ಚ ಸುದೀಪ್ ಅವರ ದಿಕ್ಕನ್ನೇ ಬದಲಿಸಿತು ನಂತರ ಹಲವಾರು ಹಿಟ್ ಸಿನೆಮಾಗಳನ್ನು ನೀಡಿ ಈಗ ನಂಬರ್ ಒನ್ ನಾಯಕನಟನಾಗಿ ಹೊರಹೋಮ್ಮಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.