ನಮಸ್ತೆ ಪ್ರೀತಿಯ ವೀಕ್ಷಕರೆ ನಿಮಗೆ ಗೊತ್ತಿರುವ ಹಾಗೆ ಇತ್ತೀಚಿಗೆ ಬಿಡುಗಡೆಯಾಗಿ ದೇಶದಾದ್ಯಂತ ಸೌಂಡ್ ಮಾಡುತ್ತಿರುವ ಕಾಂತರಾ ಚಿತ್ರದ ಬಗ್ಗೆ ನಟ ಚೇತನ್ ಮಾತಿಗೆ ರಿಷಬ್ ಶೆಟ್ಟಿ ಫಸ್ಟ್ ರಿಯಾಕ್ಷನ್ ಇತ್ತೀಚೆಗೆ ತೆರೆಕಂಡಂತಹ ಕಾಂತರಾ ಸಿನಿಮಾ, ಅತ್ಯಂತ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು ಈ ಚಿತ್ರಕ್ಕೆ ಹೆಚ್ಚಿನ ಜನ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸು ತ್ತಿದ್ದಾರೆ ಹಾಗೂ ಈ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಹಲವಾರು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು ಪ್ರತಿಯೊಬ್ಬರೂ ಕೂಡ ತಮ್ಮದಲ್ಲದ ಭಾಷೆಯಾದರೂ ಕೂಡ ಈ ಚಿತ್ರವನ್ನು ವೀಕ್ಷಣೆ ಮಾಡಿ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹಾಗೂ ಈ ಚಿತ್ರ ಇಷ್ಟು ಯಶಸ್ಸನ್ನು ಕಾಣುವುದಕ್ಕೆ ರಿಷಬ್ ಶೆಟ್ಟಿ ಅವರು ಪ್ರಮುಖವಾದಂತಹ ಕಾರಣ ಎಂದು ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ
ಆದರೆ ರಿಷಬ್ ಶೆಟ್ಟಿ ಅವರು ಮಾತ್ರ ಈ ಚಿತ್ರ ಇಷ್ಟು ಅದ್ಭುತವಾಗಿ ಮೂಡಿಬರುವುದಕ್ಕೆ ಕೇವಲ ನಾನೊಬ್ಬನೇ ಕಾರಣ ಅಲ್ಲ. ಬದಲಾಗಿ ನಾನು ಈ ಚಿತ್ರವನ್ನು ಮಾಡಬೇಕು ಎಂದು ಎಷ್ಟೋ ದಿನದಿಂದ ಪ್ರಯತ್ನ ಪಡುತ್ತಿದ್ದೆ ಹಾಗಾಗಿ ಈ ಚಿತ್ರವನ್ನು ನಾನು ತೆಗಿಯಲು ಯಾರೆಲ್ಲಾ ಪರೋಕ್ಷವಾಗಿ ಕಾರಣರಾಗಿದ್ದಾರೋ ಹಾಗೂ ಈ ದೈವರಾಧನೆ ಮತ್ತು ದೈವ ಪೂಜೆಯ ಬಗ್ಗೆ ನಾನು ತಿಳಿದುಕೊಳ್ಳಲು ಹಲವಾರು ಜನರನ್ನು ಭೇಟಿ ಮಾಡಿದ್ದೆ ಅವರೆಲ್ಲರೂ ಕೂಡ ಇದರ ಬಗ್ಗೆ ಸಂಪೂರ್ಣವಾಗಿ ವಿವರವನ್ನು ಕೊಟ್ಟಿದ್ದರು.
ಅದರಂತೆ ನಾನು ಈ ಚಿತ್ರದಲ್ಲಿ ಅವರು ಹೇಳಿರುವಂತಹ ಮಾರ್ಗದರ್ಶನದಲ್ಲಿಯೇ ಈ ಚಿತ್ರವನ್ನು ನಾನು ಇಷ್ಟು ಅದ್ಭುತವಾಗಿ ತೆರೆ ಮೇಲೆ ತೆಗೆಯಲು ಸಾಧ್ಯವಾಯಿತು ಹಾಗೂ ನಾನು ಈ ಚಿತ್ರವನ್ನು ಕೇವಲ ನನ್ನ ಇಷ್ಟದಂತೆ ಮಾಡಿಲ್ಲ ಬದಲಾಗಿ ಕೆಲವೊಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿ ನಂತರ ಈ ಚಿತ್ರವನ್ನು ತೆಗೆದಿದ್ದೇನೆ ಬದಲಾಗಿ ಅಲ್ಲಿನ ದೇವರುಗಳಿಗೆ ಅಂದರೆ ತುಳುನಾಡಿನ ದೇವರಿಗೆ ಯಾವುದೇ ರೀತಿಯಾದಂತಹ ಅವಮಾನವನ್ನು ನಾನು ಮಾಡಿಲ್ಲ ಎಂದು ಹೇಳುತ್ತಾರೆ.
ಈಗಷ್ಟೇ ಕಳೆದ ಒಂದು ದಿನದಿಂದ ಈ ಸಿನಿಮಾದ ಬಗ್ಗೆ ಕೆಲವೊಂದಷ್ಟು ಊಹಾಪೋಹಗಳು ಹರಿದಾಡುತ್ತಿದ್ದು ಅದರಲ್ಲೂ ನಟ ಚೇತನ್ ಅವರು ಈ ಚಿತ್ರ ನಮ್ಮ ಕನ್ನಡ ಚಿತ್ರ ಎಂದು ನಾನು ಹೆಮ್ಮೆ ಪಡುತ್ತೇನೆ ಆದರೆ ಇದು ನಮ್ಮ ಹಿಂದೂ ಧರ್ಮದಲ್ಲಿ ಬರುವಂತಹ ಪೂಜೆ ಅಲ್ಲ ಬದಲಾಗಿ ಇದಕ್ಕೆ ಕೆಲವೊಂದು ಧರ್ಮದವರು ಮೀಸಲಿದ್ದಾರೆ.
ಅವರು ನಮ್ಮ ಹಿಂದೂ ಧರ್ಮಕ್ಕೆ ಬರುವುದಿಲ್ಲ ಬದಲಾಗಿ ಹಿಂದುತ್ವದಲ್ಲಿ ಹಲವಾರು ಪಂಗಡಗಳು ಬರುತ್ತದೆ ಅದರಲ್ಲಿ ಇವರು ಒಬ್ಬರು ಆದರೆ ಇವರು ನಮ್ಮ ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಈ ದೇವರು ನಮ್ಮ ಹಿಂದು ದೇವರಲ್ಲ ಎಂದು ಮೀಡಿಯಾದ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಟ ಚೇತನ್ ಅವರ ಮಾತಿಗೆ ರಿಷಬ್ ಶೆಟ್ಟಿ ಅವರು ಇಲ್ಲಿಯವರೆಗೂ ಯಾವುದೇ ರೀತಿಯಾದಂತಹ ಉತ್ತರವನ್ನು ಕೊಟ್ಟಿಲ್ಲ.