ಪ್ರೀತಿಯ ವೀಕ್ಷಕರೆ, ಕನ್ನಡಚಿತ್ರರಂಗದ ನಟ ದರ್ಶನ್ ಅವರು ಸುಖ ಸುಮ್ಮನೆ ಸ್ಟಾರ್ ಪಟ್ಟ ಪಡೆದಿಲ್ಲ, ತನ್ನ ಕೆರಿಯರನ್ನೇ ಸಿನೆಮಾಕ್ಕಾಗಿ ಮೂಡಿಪಿಟ್ಟು, ಅಸಿಸ್ಟೆಂಟ್ ಕ್ಯಾಮೆರಾ ಆಗಿದ್ದ ಇವರು ಹೀರೋ ಆಗಿ ಬೆಳೆದಿದ್ದೆ ಒಂದು ದೊಡ್ಡ ರೋಚಕ ಕಥೆ. ಸಿನಿಮಾ ರಂಗದಲ್ಲಿ ದರ್ಶನ್ ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ತನ್ನ ಸ್ವಂತ ಪ್ರಯತ್ನದಿಂದ ಈ ದಿನ ಈ ಹಂತಕ್ಕೆ ಬೆಳೆದು ಇಡೀ ಪ್ರಪಂಚದಲ್ಲಿ ಹೆಚ್ಚಿನ ಫ್ಯಾನ್ಸ್ ಹೊಂದಿರುವ ಖ್ಯಾತಿಗೆ ಒಳಗಾಗಿರುವ ದರ್ಶನ್ ಅವರನ್ನು ಕಂಡರೆ ಕರ್ನಾಟಕದ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ದರ್ಶನ್ ಅವರ ಪ್ರತಿ ವಿಷಯವನ್ನು ಕೂಡ ಅಭಿಮಾನಿಗಳು ಪ್ರೀತಿಸುತ್ತಾರೆ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಅವರ ನೇರವಂತಿಕೆ ಅವರ ಪ್ಲಸ್ ಪಾಯಿಂಟ್ ಆಗಿದೆ.
ಫಿಲ್ಟರ್ ಇಲ್ಲದಂತೆ ಮನಸ್ಸಿನಲ್ಲಿ ಇರುವುದನ್ನೆಲ್ಲ ಮಾತನಾಡುವ ದರ್ಶನ್ ಅವರು ಹೊರಗೆ ಎಷ್ಟೇ ಒರಟಾಗಿ ಕಂಡರೂ ಮನದೊಳಗೆ ಮಾತ್ರ ಮುಗ್ಧ ಮಗು, ಅದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಇತ್ತೀಚೆಗೆ ದರ್ಶನ್ ಅವರ ಬಗ್ಗೆ ಹಲವಾರು ವಿವಾದಗಳು ಎದ್ದಿವೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ದರ್ಶನ್ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಅವರ ‘ಕ್ರಾಂತಿ’ ಸಿನಿಮಾವು ಅಂತಿಮ ಹಂತ ತಲುಪಿದ್ದು ಸದ್ಯದಲ್ಲೇ ಅಭಿಮಾನಿಗಳಿಗೆ ಥಿಯೇಟರ್ ಅಲ್ಲಿ ದರ್ಶನ ಕೊಡಲಿದ್ದಾರೆ ಮತ್ತು ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಡಿ-56 ಸಿನಿಮಾ ತಯಾರಾಗುತ್ತಿದ್ದು ಈ ಎರಡು ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದ್ದು ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್. 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್: ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ,ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಸಂದರ್ಶನಗಳಲ್ಲಿ ಮಾತನಾಡುವ ವೇಳೆ ಎಂದಿನಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಇವರು ತಮ್ಮ ದಿನದ ಖರ್ಚು ಎಷ್ಟು ಎನ್ನುವುದನ್ನು ಕೂಡ ಹೇಳಿದ್ದಾರೆ. ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ಮಾಡಲು ಬರುತ್ತಿರುವ ಸಿನಿಮಾ ಆದ ಕಾರಣ ಸಿನಿಮಾ ಬಗ್ಗೆ ವಿವರಣೆ ಕೊಡುವಾಗ. ತನ್ನ ಮಗನ ವರ್ಷದ ಶಾಲೆಯ ಫೀಸ್ ಎಷ್ಟು ಎಂದು ಹೇಳಿದ ಡಿ ಬಾಸ್ ಅವರು ಈಗ ದಿನವೊಂದಕ್ಕೆ ತಾವೇಷ್ಟು ಖರ್ಚು ಮಾಡುತ್ತಾರೆ ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ.
ದರ್ಶನ್ ಅವರು ಒಂದು ದಿನಕ್ಕೆ ಒಂದೂವರೆಯಿಂದ 2 ಲಕ್ಷ ಖರ್ಚು ಮಾಡುತ್ತಾರಂತೆ. ತಿಂಗಳಿಗೆ ಕಡಿಮೆ ಎಂದರೆ 45 ಲಕ್ಷ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲಾ ಅವರು ಅನಾವಶ್ಯಕವಾಗಿ ವ್ಯರ್ಥ ಖರ್ಚು ಮಾಡುತ್ತಿಲ್ಲ. ಮೈಸೂರಿನಲ್ಲಿ ಸ್ವಂತ ಫಾರ್ಮ್ ಹೌಸ್ ಮಾಡಿ ಅಲ್ಲಿ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡು ಸಾಗುತ್ತಿರುವ ದರ್ಶನ್ ಅವರು ಆ ಪ್ರಾಣಿಗಳ ಆಹಾರಕ್ಕಾಗಿ, ಅವರ ಬಳಿ ಇರುವ ದುಬಾರಿ ಕಾರುಗಳ ತಿಂಗಳ ಮೇಂಟೆನೆನ್ಸ್ ಗಾಗಿ ಮತ್ತು ಅನಾಥಾಶ್ರಮಗಳಿಗೆ ಕೊಡುವ ದೇಣಿಗೆಗಳಿಗಾಗಿ ಮತ್ತು ಸಹಾಯ ಕೇಳಿ ಬರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಇಷ್ಟು ಖರ್ಚಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆ ನಟ ಆಗಿರುವ ದರ್ಶನ ಅವರು ಒಂದು ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಅಲ್ಲದೆ ಇನ್ನಿತರ ಉದ್ಯಮಗಳಲ್ಲೂ ಬಂಡವಾಳ ಹೂಡಿದ್ದಾರೆ ದರ್ಶನ್ ಒಂದು ದಿನಕ್ಕೆ ಮಾಡುವ ಖರ್ಚಿನಲ್ಲಿ ಸಾಮಾನ್ಯ ಜನರು ಒಂದು ವರ್ಷ ಜೀವನ ಮಾಡಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.