ಅಯ್ಯಯ್ಯೋ ‘ಕಾಂತಾರ’ ಅಬ್ಬರಕ್ಕೆ ಕೊಚ್ಚಿಹೋದ ರಶ್ಮಿಕಾ ಮಂದಣ್ಣ ಸಿನಿಮಾ; 25ನೇ ದಿನ ರಿಷಬ್ ಚಿತ್ರ ಗಳಿಸಿದೆಷ್ಟು?

ನಮ್ಮ ಕನ್ನಡದ ಸಿನೆಮಾರಂಗದಲ್ಲಿ ಇದೀಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಹಳಷ್ಟು ಸದ್ದು ಮಾಡಿದ್ದು ಇಡೀ ಭಾರತೀಯ ಚಿತ್ರರಂಗ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿದೆ. ಇನ್ನು ಕಾಂತಾರ ಸಿನಿಮಾದ ಕುರಿತು ಎಲ್ಲರಿಗೂ ಕೂಡ ಹೇಳಬೇಕಾದಂತಹ ಅವಶ್ಯಕತೆ ಇಲ್ಲ ಅದರ ಎಲ್ಲಾ ಬಗೆಗಿನ ವಿಚಾರಗಳು ತಿಳಿದೇ ಇರುತ್ತದೆ ಕಾರಣ ಆ ಸಿನಿಮಾ ಇದೀಗ ಬಹಳಷ್ಟು ಸದ್ದು ಮಾಡಿದ್ದು ಎಲ್ಲರೂ ಕೂಡ ಥಿಯೇಟರ್ಗಳಿಗೆ ಹೋಗಿ ವೀಕ್ಷಣೆ ಮಾಡಿರುವುದು ಬಹಳ ವಿಶೇಷವಾಗಿದೆ. ಇದಕ್ಕೆ ಪಾನ್ ಇಂಡಿಯಾ ಲೆವೆಲ್ ಅಲ್ಲಿ ಕೂಡ ಬಹಳಷ್ಟು ಹೈಪ್ ಕ್ರಿಯೇಟ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇನ್ನು ನಮ್ಮ ಕನ್ನಡ ಇಂಡಸ್ಟ್ರಿ ಚಿಕ್ಕದು ಎಂದು ಹೇಳಿ ಬಿಟ್ಟು ಹೋದಂತಹ ರಶ್ಮಿಕಾ ಮಂದಣ್ಣ ಅವರಿಗೆ ಈ ಸಿನಿಮ ಬಹಳಷ್ಟು ತಿರುಗೇಟು ನೀಡಿದೆ ಎಂದೇ ಹೇಳಬಹುದಾಗಿದೆ. ಇನ್ನು ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿಕೊಂಡಂತಹ ವಿಚಾರ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು ಅವರು ಮೊದಲು ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ನಂತರ ಕನ್ನಡವೇ ಬರುವುದಿಲ್ಲ ಎಂದು ಹೇಳಿದಂತಹ ವಿಚಾರ ಎಲ್ಲರಿಗೂ ಕೂಡ ಬೇಸರವನ್ನುಂಟು ಮಾಡಿದ್ದು ಅದೇ ರೀತಿಯಾಗಿ ಕೋಪವನ್ನು ಕೂಡ ಉಂಟು ಮಾಡಿತು.

ಅಂದಹಾಗೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್ ನಟನೆಯ ಗುಡ್‌ಬೈ ಸಿನಿಮಾ ಕಲೆಕ್ಷನ್ ಹಿಂದಿಕ್ಕಿದೆ. ಗುಡ್‌ಬೈ ಸಿನಿಮಾ ರಿಲೀಸ್ ಆಗಿ ಒಂದು ವಾರಕ್ಕೆ ಕೇವಲ 5 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರ ಮಾಡಿತ್ತು. ಆದರೆ ಕಾಂತಾರ ಸಿನಿಮಾ ರಿಲೀಸ್ ಆಗಿ 25 ದಿನಕ್ಕೆ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕಾಂತಾರ ಅಬ್ಬರಕ್ಕೆ ರಶ್ಮಿಕಾ ಸಿನಿಮಾ ಕೊಚ್ಚಿಹೋಗಿದೆ. ಇನ್ನೆರಡು ದಿನಗಳಲ್ಲಿ ಕಾಂತಾರ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಲಿದೆ. ತಮಿಳು ಮತ್ತು ತೆಲುಗಿನಲ್ಲೂ ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 
ಇನ್ನು ಅವರು ಇದೀಗ ಒಂದು ಸಿನಿಮಾಗೆ ಬರೋಬ್ಬರಿ ನಾಲ್ಕು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಆದರೂ ಕೂಡ ಅವರಿಗೆ ಇರುವಂತಹ ಸಂಭಾವನೆಗಿಂತ ಇದೀಗ ರಿಷಬ್ ಶೆಟ್ಟಿ ಮತ್ತು ಅವರ ಚಿತ್ರತಂಡ ಅವರ ಒಂದು ಸಿನಿಮಾದ ಮೂಲಕವೇ ಬರೋಬ್ಬರಿ 200 ಪಟ್ಟು ಹೆಚ್ಚು ಸಂಭಾವನೆಯನ್ನು ಪಡೆದುಕೊಂಡು ಕಲೆಕ್ಷನ್ ನಲ್ಲಿ ಎಲ್ಲಾ ಸಿನೆಮಾಗಳಿಗಿಂತ ಮುಂದೆ ನಿಂತಿದೆ. ಇನ್ನು ರಿಷಬ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿಯವರ ಬಹಳ ಒಳ್ಳೆ ಸ್ನೇಹಿತರಾಗಿದ್ದು ಅವರ ಸಿನಿಮಾದ ಸಂಭ್ರಮದಲ್ಲಿ ಇಬ್ಬರು ಕೂಡ ಭಾಗಿಯಾಗಿದ್ದಾರೆ.

ಇನ್ನು ಕನ್ನಡಿಗರಾಗಿದ್ದರೂ ಕೂಡ ಅವರು ನಮ್ಮ ಕನ್ನಡ ಇಂಡಸ್ಟ್ರಿಯ ಈ ಸಿನಿಮಾವನ್ನು ಹೊಗಳಲು ಕೂಡ ಸಾಧ್ಯವಾಗುತ್ತಿಲ್ಲ ಕಾರಣ ಅವರು ಆ ರೀತಿಯಾಗಿ ಮಾತನಾಡಿ ಅವರೇ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ಹೋದ ಕಾರಣವಾಗಿದೆ ಇನ್ನು ಮುಂಬರುವ ದಿನಗಳಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಮತ್ತು ರಾಜ್ ಬಿ ಶೆಟ್ಟಿ, ಇದೇ ರೀತಿಯಲ್ಲಿ ಮುಂದೆ ಸಾಗುತ್ತಾ ಹಲವು ಯಶಸ್ಸಿನ ಮೆಟ್ಟಲುಗಳನ್ನು ಹತ್ತುತ್ತಾ ಹೋಗಲಿ ಎಂಬುದೇ ಎಲ್ಲರ ಆಸೆಯಾಗಿದೆ ಮತ್ತು ಅವರ ಕನಸು ಕೂಡ ಇದೆ ಆಗಿದೆ.ಈ ವಿಚಾರದ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *