ಅಪ್ಪು ಪುತ್ರಿ ವಂದಿತಾಳನ್ನು ದೊಡ್ಡವಳಾದ ಮೇಲೆ ಏನಾಗುತ್ತೀಯ ಅಂತ ಕೇಳಿದಕ್ಕೆ ಆಕೆ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

appu daughter vandita education and age

ನಮ್ಮ ನಿಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಮಿಂಚಿದ್ದು ಅಷ್ಟೇ ಅಲ್ಲದೆ ನಿಜ ಜೀವದಲ್ಲಿಯೂ ಸಹ ಒಬ್ಬ ದೊಡ್ಡ ಸ್ಟಾರ್ ನಟನಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹೀಗೆ ಅಪ್ಪು ಅವರು ಚಿತ್ರರಂಗಕ್ಕೆ ಒಂದು ಅತ್ಯುತ್ತಮ ನಾಯಕನಾಗಿ ಸಾಕಷ್ಟು ಸಿನೆಮಾಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅವರು ಮಾಡಿರುವ ಅಷ್ಟು ಚಿತ್ರಗಳು ಒಂದು ಉತ್ತಮ ಸಂದೇಶವನ್ನು ನೀಡುತ್ತದೆ.
ಅಪ್ಪು ಅವರು ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ನಟಿಸಿರುವಂತ ಸಿನೆಮಾಗಳು ವಸಂತ ಗೀತಾ, ಭಕ್ತ ಪ್ರಹಾಲಾದ, ಯಾರಿವನು, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರ, ಬೆಟ್ಟದ ಹೂವು, ಇಷ್ಟು ಚಿತ್ರಗಳಲ್ಲಿ ಬಾಲನಟನಾಗಿ ಸೈ ಎನಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ ಬೆಟ್ಟದ ಹೂವು ಚಿತ್ರದ ರಾಮು ಪತ್ರಕ್ಕಾಗಿ ಅಪ್ಪು ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಪುನೀತ್ ಅವರ ಅಪ್ಪು ಸಿನೆಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಪ್ಪು ಸಿನೆಮಾದ ನಂತರ ಸಾಕಷ್ಟು ಸಿನೆಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಅವರು ನಟನೆಯನ್ನು.

ಅಷ್ಟೇ ಅಲ್ಲದೆ ಅಪ್ಪು ಅವರು ಕನ್ನಡದ ಕೋಟ್ಯಧಿಪತಿ ಎನ್ನುವ ಅತೀ ದೊಡ್ಡ ಶೋ ಮೂಲಕ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಗೌರವಕ್ಕೆ ಪತ್ರರಾಗಿದ್ದಾರೆ. ಅಪ್ಪು ನಮ್ಮನ್ನು ಅಗಲಿರಿವುದು ನಮ್ಮಿಂದ ಇನ್ನು ಸಹ ಅರಗಿಸಿಕೊಳ್ಳಲ್ಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ದೈಹಿಕವಾಗಿ ದೂರವಾಗಿದ್ದರು ಸಹ ಮಾನಸಿಕವಾಗಿ ಯಾವಾಗಲೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಭಿಮಾನಿಗಳು ಇಂದಿಗೂ ಸಹ ಅವರು ಇಲ್ಲದಂತ ನೋವುವನ್ನು ಸಹಿಸಿಕೊಳ್ಳಲು ಒಪ್ಪಿಕೊಳ್ಳುವುದಿಲ್ಲ. ಅದೆಷ್ಟೋ ಜನರು ಅಪ್ಪು ಅವರ ಫೋಟೋವನ್ನು ತಮ್ಮ ದೇವರು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ.

ಪುನೀತ್ ಅವರು ನಮ್ಮನೆಲ್ಲ ಅಗಲಿ 7 ತಿಂಗಳು ಕಳೆದು ಹೋಗಿದೆ. ಅಪ್ಪು ಅವರು ಸಾಕಷ್ಟು ಜನ ಅನಾಥರು ಮತ್ತು ವೃದ್ಧಿರನ್ನು ಸಾಕುವಂತ ಕೆಲಸವನ್ನು ಸಹ ಮಾಡಿದ್ದಾರೆ. ಸಾಕಷ್ಟು ಅನಾಥಶ್ರಮಗಳಿಗೆ ಅಪ್ಪು ಅವರು ಸಹಾಯವನ್ನು ನೀಡಿ ಅವರ ಜೀವನವನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸಹಾಯವನ್ನು ಮಾಡುವಂತಹ ಸಹಾಯವನ್ನು ಮಾಡುವ ನಮ್ಮ ಅಪ್ಪು ಯಾರೊಂದಿಗೂ ಸಹ ತಾವು ಮಾಡುತ್ತಿದ್ದ ಯಾವ ಕೆಲಸಗಳನ್ನು ಹೊರಗಡೆ ಹೇಳಿಕೊಳ್ಳುತ್ತಿರಲಿಲ್ಲ. ಇದು ಅಪ್ಪು ದೊಡ್ಡ ಗುಣ.

ಇನ್ನು ಕರ್ನಾಟಕದ ಸಾಕಷ್ಟು ಬಡ ಕುಟುಂಬಗಳಿಗೆ ಅಪ್ಪು ಅವರು ನೇರವಾಗಿದ್ದರೆ. ಅಪ್ಪು ಅವರ ಬಳಿ ಯಾರೇ ಕಷ್ಟ ಅಂತ ಬಂದರು ಅವರನ್ನು ಬರಿಗೈನಲ್ಲಿ ವಾಪಾಸ್ ಕಳುಹಿಸುತ್ತಿರಲಿಲ್ಲ. ಅಷ್ಟೊಂದು ಉದರವಾದ ಮನಸುಲ್ಲವರು. ಸಿನೆಮಾದಲ್ಲಿ ನಟಿಸಿ ಹೀರೊ ಎನಿಸಿಕೊಳ್ಳುವುದು ಸುಲಭ, ಅದರೆ ನಿಜ ಜೀವನದಲ್ಲಿ ಹೀರೊ ಎನಿಸಿಕೊಳ್ಳುವುದು ತುಂಬಾ ಕಷ್ಟ ಆದರೆ ಅಪ್ಪು ಅವರು ಸಿನೆಮಾದಲ್ಲಿ ಹೀರೊ ಎಂದು ಹೇಗೆ ಗುರುತಿಸಿಕೊಂಡರು ಅದೇ ರೀತಿಯಲ್ಲಿ ನಿಜಜೀವನದಲ್ಲೂ ಸಹ ಹೀರೊ ರೀತಿಯ ಕೆಲಸವನ್ನು ಮಾಡಿದ್ದಾರೆ. ಇಂತಹ ಉತ್ತಮ ಮನಸ್ಸು ಎಲ್ಲರಿಗೂ ಬರಲು ಸಾಧ್ಯವಿಲ್ಲ.

ಪುನೀತ್ ರಾಜ್ ಕುಮಾರ್ ಅವರಿಗೆ ಬೆಂಬಲವಾಗಿ ಅವರ ಪತ್ನಿ ಅಶ್ವಿನಿ ಅವರು ಸಹ ನೇರವಾಗಿ ಅವರ ಜೊತೆಯಲ್ಲಿ ನಿಂತಿದ್ದರು. ಅಪ್ಪು ಅವರು ಒಬ್ಬ ಉತ್ತಮವಾದ ನಟ ಅಷ್ಟೇ ಅಲ್ಲದೇ ನಿರ್ಮಾಪಕ, ನಿರ್ದೇಶಕ, ಗಾಯಕರು ಕೂಡ ಆಗಿದ್ದರು. ಅಪ್ಪು ಒಬ್ಬ ಉತ್ತಮ ಹಾಡುಗಾರರಾಗಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನು ಸಹ ಉತ್ತಮವಾದ ಒಂದು ವಾತಾವರಣದಲ್ಲಿ ಬೆಳೆಸಿದ್ದಾರೆ. ದೃತಿ ಮತ್ತು ವಂದಿತಾ ಎಂಬ ಇಬ್ಬರು ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ.

ಪುನೀತ್ ಅವರ ಹಿರಿಯ ಮಗಳು ದೃತಿ ಅವರು ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಪುನೀತ್ ಅವರ ಎರಡನೇ ಪುತ್ರಿ ವಂದಿತಾ ಅವರು ಈಗ ಹತ್ತನೇ ತರಗತಿಯಲ್ಲಿ ಉತ್ತಿರ್ಣರಾಗಿದ್ದು ಅವರು ಮುಂದೆ ಯಾವುದೇ ರೀತಿಯದಂತಹ ದೊಡ್ಡ ಕೆಲಸಗಳಿಗೆ ಹೋಗದೆ ತಮ್ಮ ತಂದೆ ಮಾಡುತ್ತಿದಂತ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಅಪ್ಪು ಅವರ ಟ್ರಸ್ಟ್ ಅನ್ನು ಮುಂದುವರಿಸುತ್ತೇನೆ ಈ ಟ್ರಸ್ಟ್ ನಾ ಮುಖಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತೇನೆ ಹಾಗೂ ಹಿರಿಯರಿಗೆ ಆಸರೆ ಆಗುತ್ತೇನೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟರ ಮಕ್ಕಳು ದೊಡ್ಡವರದ ಮೇಲೆ ಹೀರೊ ಅಥವಾ ಹೀರೋಯಿನ್ ಅಥವಾ ದೊಡ್ಡ ಬಿಸ್ನೆಸ್ ಮ್ಯಾನ್ ಆಗಬೇಕು ಅಂತ ಬಯಸುತ್ತಾರೆ.

ಆದರೆ ಅಪ್ಪು ಮಗಳು ವಂದಿತಾ ಮಾತ್ರ ಸಮಾಜಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ ನಿಜಕ್ಕೂ ಆಶ್ಚರ್ಯವೇ. ತನ್ನ ತಂದೆಯಂತೆ ಮಗಳು ದಾನ ಧರ್ಮ ಮಾಡುವಂತ ಈ ನಿರ್ಧಾರ ತೆಗೆದುಕೊಂಡಿರುವುದು ಕನ್ನಡಿಗರು ಮೆಚ್ಚಾಲೆ ಬೇಕು. ವಂದಿತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ..

Leave a Reply

Your email address will not be published. Required fields are marked *